
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಚಂದ್ರಶೇಖರ ಕುರ್ತಕೋಟಿ, ಸಹಾಯಕ ನಿರ್ದೇಶಕರು, ಪಂ.ರಾಜ್ಯ ಹುಬ್ಬಳ್ಳಿ ಇವರು ಆಗಮಿಸಿದ್ದು, ಶ್ರೀಮತಿ ಸವಿತಾ ಪಾಟೀಲ, ವಕೀಲರ ಸಂಘ ಹುಬ್ಬಳ್ಳಿ. ಇವರು ಪೋಕೋ ಕಾಯ್ದೆ, ಶ್ರೀ. ಕರಿಯಪ್ಪ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಧಾರವಾಡ ಇವರು ಬಾಲ್ಯ ವಿವಾಹ ಕುರಿತು ಹಾಗೂ ಶ್ರೀಮತಿ ರೇಖಾ ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆ, ಹುಬ್ಬಳ್ಳಿ ಇವರು ಪಿ,ಸಿ,ಪಿ.ಎನ್.ಡಿ.ಟಿ ಕಾಯ್ದೆ ಕುರಿತು ಸಂಪನ್ಮೂಲ ವ್ಯಕ್ತಿಗಳು ಕಾನೂನುಗಳ ಕುರಿತು ಮಾಹಿತಿಯನ್ನು ನೀಡಿದರು. ಶ್ರೀಮತಿ. ಮಂಜುಳಾ ಪಾಟೀಲ, ಹಿರಿಯ ಮೇಲ್ವಿಚಾರಕಿಯರು ಇವರು ಸಮಾರಂಭದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ವಚನ ಸ್ವೀಕಾರ ಮೂಲಕ ಅಭಿಯಾನಕ್ಕೆ ಕೈಜೋಡಿಸುವುದಾಗಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು. ಶ್ರೀಮತಿ ಶೈಲಜಾ ಅರಕೇರಿ ಹಿರಿಯ ಮೇಲ್ವಿಚಾರಕಿಯರು ಇವರು ಕಾರ್ಯಕ್ರಮದ ನಿರೂಪಣೆ ಕೈಗೊಂಡಿದ್ದು, ಶ್ರೀಮತಿ. ದಾಕ್ಷಾಯಣಿ ಬಿಂಗೆ ಮೇಲ್ವಿಚಾರಕಿಯರು ಸ್ವಾಗತಿಸಿದರು. ಇಲಾಖೆಯ ಯೋಜನೆಗಳ ಕುರಿತು ಶ್ರೀಮತಿ. ಶೋಭಾ ಹಿರೇಮಠ, ಶ್ರೀಮತಿ. ರಾಜೇಶ್ವರಿ ಕಂಬಾರ, ಮೇಲ್ವಿಚಾರಕಿಯರು ತಿಳಿಸಿದರು. ಕಾಲೇಜಿನ ಪ್ರೊ. ಶ್ರೀ ಸಾಜೀದ ಹುಸೇನ ಎನ್. ವಂದನಾರ್ಪಣೆ ಮಾಡಿದರು.
ವರದಿ ನಿತೀಶಗೌಡ ತಡಸ ಪಾಟೀಲ್

