Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸರ್ಕಾರದ ಕಾರ್ಯಕ್ರಮಕ್ಕೆ ಬಹಿಷ್ಕಾರ

Advertisement
ದಾಂಡೇಲಿ : ಎಪ್ರೀಲ್ 14 ರಂದು ಸರ್ಕಾರದಿಂದ ನಡೆಯುತ್ತಿರುವ ಕಾರ್ಯಕ್ರಮಕ್ಕೆ ನಮ್ಮ ಹಳೇದಾಂಡೇಲಿ ಕಡೆಗಣಿಸಿದ್ದಕ್ಕೆ ನಾವು ಸರ್ಕಾರಿ ಕಾರ್ಯಕ್ರಮವನ್ನು ಬಹಿಷ್ಕಾರ ಹಾಕುತ್ತಿದ್ದೇವೆ

ವಿವಿಧ ಸಂಘಟನೆಯ ಮುಖಾಂತರ ಮಾನ್ಯ ಡಿ ವೈ ಎಸ್ ಪಿ ಸಾಹೇಬ್ರ ಮೂಲಕ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಶಾಸಕರು ಮತ್ತು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಮನವಿ.  ಎಪ್ರೀಲ್ 14 ರಂದು ಭಾರತ ರತ್ನ ಸಂವಿಧಾನ ಶಿಲ್ಪಿ ಡಾ|| ಬಾಬಾ ಸಾಹೇಬ ಅಂಬೇಡ್ಕರರವರ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಬೇಕೆಂದು ತಾಲೂಕಾಡಳಿತ ವತಿಯಿಂದ ತಡವಾಗಿ ಮತ್ತು ಎಪ್ರೀಲ್ 05 ರಂದು ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನರಾವ್ ರವರ ಕಾರ್ಯಕ್ರಮದ ಪೂರ್ವ ಭಾವಿ ಸಭೆಯನ್ನು ಸಭೆ ಕರೆಯಲಾಗದೇ ತಡವಾಗಿ ಎಪ್ರೀಲ್ 07 ರಂದು ಪೂರ್ವ ಭಾವಿ ಸಭೆಯನ್ನು ಕರೆಯುತ್ತಾರೆ

ಸಭೆಯಲ್ಲಿ ಸರಿಯಾಗಿ ಯಾರಿಗೂ ಮಾಹಿತಿಯನ್ನು ನೀಡದೇ ಕೇಲ ಜನರನ್ನು ತೆಗೆದುಕೊಂಡು ಪೂರ್ವಭಾವಿ ಸಭೆಯನ್ನು ನಡೆಸಿರುತ್ತಾರೆ ಈ ಸಭೆಯಲ್ಲಿ ನಾನು ಹಳೇದಾಂಡೇಲಿಯಿಂದ ಸರ್ಕಾರದ ಕಾರ್ಯಕ್ರಮವನ್ನು ಈ ಜಯಂತಿ ಕಾರ್ಯಕ್ರಮದ ಮೂಲಕ ಆರಂಭಿಸಬೇಕೆಂದು ತಿಳಿಸಿದರೆ ಸಭೆಯಲ್ಲಿ ಕೆಲವರು ಭಿನ್ನಾಭಿಪ್ರಾಯವನ್ನು ವ್ಯಕ್ತ ಪಡಿಸಿದರು.

[video width="848" height="364" mp4="http://bharathvaibhav.com/wp-content/uploads/2026/04/WhatsApp-Video-2026-04-14-at-5.26.56-PM.mp4"][/video]

ಆದರೆ ನಾವು ಹಳೇದಾಂಡೇಲಿಯಿಂದ ಆರಂಭಿಸಬೇಕೆಂದು ಕಳೇದ 2011 ರಿಂದ 2015ರ ವರೆಗೆ ಅದ್ದೂರಿಯಾಗಿ ಸಾವರಾರು ಸಂಖ್ಯೆಯಲ್ಲಿ ಕಾರ್ಯಕ್ರಮವನ್ನು ನಗರ ಆಡಳಿತದಲ್ಲಿ ನಡೆಸಿಕೊಟ್ಟಿರುತ್ತಾರೆ. ಅದೇ ರೀತಿ ಈ ಬಾರಿಯೂ ಕೂಡ ಸರ್ಕಾರದ ಕಾರ್ಯಕ್ರಮವನ್ನು ಹಳೇ ದಾಂಡೇಲಿಯಿಂದ ಆರಂಭಿಸಬೇಕೆಂದು ಕೆಲ ಜನಪರ ಸಂಘಟನೆಗಳು ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಹಳೇದಾಂಡೇಲಿಯ ನಾಗರಿಕರಿಂದ ಮಾನ್ಯ ತಹಶೀಲ್ದಾರರವರಿಗೆ ಮನವಿಯನ್ನು ಮಾಡಿದ್ರು ಕೂಡ ಹಳೇದಾಂಡೇಲಿಯ ಜನರಿಗೆ ಮತ್ತು ಹಳೇದಾಂಡೇಲಿ ವಿಭಾಗಕ್ಕೆ ಕಡೆಗೆಣಿಸಿದ್ದಾರೆ. ಹಳೇದಾಂಡೇಲಿಯಿಂದ ಆರಂಭಿಸಬೇಕೆಂದು ಮೂಲ ಕಾರಣವೆನೆಂದರೆ ದಾಂಡೇಲಿ ಪ್ರಾರಂಭವಾಗಿದ್ದೇ ಹಳೇದಾಂಡೇಲಿಯಿಂದ ಹಳೇ ದಾಂಡೇಲಿಯಲ್ಲಿ ಮೊದಲು ನ್ಯಾಯಾಲಯ ವಿದ್ದು ಸಾರ್ವಜನಿಕ ಆಸ್ಪತ್ರೆ ಸಂಡೇ ಮಾರ್ಕೇಟ್ ರೈಲ್ವೆ ನಿಲ್ದಾಣ ಅಂಚೆ ಕಛೇರಿ ಸ್ವಾಮೀಲ್ ಮಿಲ್ ಪ್ಲಾವುಡ್ ಕಂಪನಿ ಲೈಯ್ ಬಾಯ್ ಕಂಪನಿ ಡಾಂಬರ ಕಂಪನಿ ಫಾರೇಸ್ಟ ತರಬೇತಿ ಕೇಂದ್ರ ಬಸ್ಸಿನ ವ್ಯವಸ್ಥೆ ಸರಿಯಾಗಿಲ್ಲ ರುದ್ರ ಭೂಮಿಗೆ ಹೋಗಲು ರಸ್ತೆ ಇಲ್ಲ ಹೀಗೆ ಹೇಳುತ್ತ ಹೋದರೇ ಹಳೇದಾಂಡೇಲಿಯ ಕೊಡುಗೆ ಹೆಚ್ಚಾಗಿದೆ. ಇವೆಲ್ಲವನ್ನು ತೆಗೆದು ಹಾಕಿ ಹಳೇದಾಂಡೇಲಿಗೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆ. ಇವೆಲ್ಲ ಸಂಗತಿಗಳು ನೋಡಿ ಸರ್ಕಾರದಿಂದ ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳಾಗಲಿ ಮತ್ತು ಸರ್ಕಾರದಿಂದ ನಡೆಯುತ್ತಿರುವ ಕಾರ್ಯಕ್ರಮವನ್ನು ಮಾಡುವ ಮೂಲಕ ಹಳೇದಾಂಡೇಲಿಗೆ ಜೀವ ತುಂಬುವ ಕೆಲಸವನ್ನು ಮಾಡಬೇಕೆಂದು ನಾವು ಸರ್ಕಾರಕ್ಕೆ ಮನವಿಯನ್ನು ಮಾಡಿದರೂ ಕೂಡ ನಮ್ಮ ಮನವಿಯನ್ನು ಸ್ಪಂದಿಸದೇ ನನಗೆ ಅವಮಾನ ಮಾಡುತ್ತಿದ್ದಾರೆ. ಆರು ವಾರ್ಡಗಳಿದ್ದು ಆರು ವಾರ್ಡಿನಲ್ಲಿ ಒಟ್ಟೂ ಜನಸಂಖ್ಯೆ ಹತ್ತರಿಂದ ಹದಿನೈದು ಸಾವಿರ ಮತದಾನವನ್ನು ಹೊಂದಿದ್ದು ಮತಕ್ಕೆ ಮಾತ್ರ ನಮ್ಮನ್ನು ಬಳಕೆ ಮಾಡುತ್ತಿದ್ದಾರೆ ಹಾಗೂ ನಗರ ಸಭೆಗೆ ಠೇವಣಿ ಮಾಡಿಕೊಳ್ಳಲು ಮಾತ್ರ ಹಳೇದಾಂಡೇಲಿ ಜನರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಇವೆಲ್ಲ ಕಾರಣದಿಂದ ಬೇಸತ್ತು ಮನಸಿಗೆ ನೋವು ಮಾಡಿಕೊಂಡು ಈ ದಿನದ ಕಾರ್ಯಕ್ರಮವನ್ನು ಭಹಿಷ್ಕಾರ ಹಾಕುವ ಮೂಲಕ ಸರ್ಕಾರಕ್ಕೆ ಪತ್ರವನ್ನು ಬರೆಯುತ್ತಿದ್ದೇವೆ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ