Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಿಟ್ಟಿ ಯೋಜನೆಗಳಿಂದ ಹಣ ವ್ಯರ್ಥವಾಗುತ್ತಿದೆ : ಬಿ. ಆರ್ ಪಾಟೀಲ್

Advertisement
ಬೆಂಗಳೂರು : ಇಲಾಖೆಯವರು ಬಿಟ್ಟಿಯಾಗಿ ಯೋಜನೆಗಳನ್ನು ಹಾಕಿಕೊಳ್ಳುತ್ತಾರೆ. ಹಣ ವ್ಯರ್ಥ ಆಗುತ್ತಿದೆ.‌

ಜನರಿಗೆ ಉಪಯೋಗ ಆಗುತ್ತಿಲ್ಲ. ಹೀಗಾಗಿ ಅನೇಕ ಸರ್ಕಾರದ ಯೋಜನೆಗಳು ವಿಫಲವಾಗುತ್ತಿವೆ ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ತಿಳಿಸಿದರು.

ನಿನ್ನೆ ಗಾಂಧಿಭವನದಲ್ಲಿ ನಡೆದ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಅವಶ್ಯಕತೆ, ಸಾಕ್ಷ್ಯ ಮತ್ತು ಫಲಿತಾಂಶ ಆಧಾರಿತ ನೀತಿ ಹಾಗೂ ಯೋಜನೆ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಸರ್ವ ಶಿಕ್ಷಣ ಅಭಿಯಾನದಡಿ ಕಟ್ಟಿದ ಎಲ್ಲಾ ಶಾಲಾ ಕಟ್ಟಡಗಳು ಖಾಲಿ ಬಿದ್ದಿವೆ, ಅಲ್ಲಿ ವಿದ್ಯಾರ್ಥಿಗಳು ಸಹ ಇಲ್ಲ, ಶಿಕ್ಷಕರು ಮೊದಲೇ ಇಲ್ಲ.ನನ್ನ ಕ್ಷೇತ್ರದಲ್ಲಿ ನಾನೇ ಕೇಳೇ ಇಲ್ಲ, ನನಗೆ ಗೊತ್ತೂ ಇಲ್ಲ‌. ಆದರೆ ಒಂದು ಗ್ರಾಮದಲ್ಲಿ ಐದು ಕೋಟಿ ರೂಪಾಯಿ ಬಿಡುಗಡೆ ಮಾಡಿ ದೊಡ್ಡ ಹಾಸ್ಟೆಲ್ ಕಟ್ಟಲು ಹಣ ಮಂಜೂರಾಗಿದೆ. ಅಷ್ಟು ದೊಡ್ಡ ಹಾಸ್ಟೆಲ್ ಅಗತ್ಯನೂ ಇಲ್ಲ. ಇದೇ ರೀತಿ ಅನೇಕ ಕಡೆ ಹಾಸ್ಟೆಲನ್ನು ಕಟ್ಟಲಾಗಿದೆ.‌ ಮಕ್ಕಳು ಅಲ್ಲಿ ಇಲ್ಲ.

ಈ ರೀತಿ ಅನೇಕ ಕಡೆ ಹಣ ವ್ಯರ್ಥ ಆಗುತ್ತದೆ. ಬೇಡಿಕೆ ಆಧಾರದಲ್ಲಿ ಯೋಜನೆ ಕೊಡಬೇಕು ಎಂದು ತಿಳಿಸಿದರು.ಯೋಜನೆ ಸಂಪೂರ್ಣವಾಗಿ ಹಳಿ ತಪ್ಪಿ ಹೋಗುತ್ತಿದೆ. ಆ ಮೂಲಕ ಹಣ ವ್ಯರ್ಥವಾಗುತ್ತಿದೆ. ಮೊದಲೇ ಹಣದ ಕೊರತೆ ಇದೆ.

ಇತಿ ಮಿತಿಯಲ್ಲಿ ಯೋಜನೆ ರೂಪಿಸಿ ಅನುಷ್ಠಾನ ಮಾಡಬೇಕು. ಬಜೆಟ್ ಪೂರ್ವದಲ್ಲಿ ವರದಿ ನೀಡುವಂತೆ ಸಿಎಂ ಹೇಳಿದ್ದರು. ಆದರೆ, ಬೇಸರದಿಂದ ಹೇಳುತ್ತೇನೆ, ಸಿಎಂ ಸೂಚನೆಯನ್ನು ನಡೆಸಿಕೊಳ್ಳಲು ಆಗುತ್ತಿಲ್ಲ. ಗ್ರಾಮ ಸಭೆ, ತಾಲೂಕು ಮಟ್ಟದ ಸಮಿತಿ ಸಭೆ, ಜಿಲ್ಲಾ ಮಟ್ಟದ ಸಭೆ ಮಾಡಬೇಕು ಎಂದು ಸೂಚನೆ ನೀಡಲಾಗಿತ್ತು. ಆದರೆ ಬಹುತೇಕ ಜಿಲ್ಲೆಗಳಲ್ಲಿ ಸಭೆಗಳನ್ನೇ ಮಾಡದಿರುವುದು ಬೇಸರದ ಸಂಗತಿಯಾಗಿದೆ ಎಂದರು.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ