ಚಾಮರಾಜನಗರ: ಬಿ ಆರ್ ಟಿ ಹುಲಿ ಸಂರಕ್ಷಿತ ಪ್ರದೇಶ ಕೊಳ್ಳೇಗಾಲ ವನ್ಯಜೀವಿ ವಲಯದ ಉಪವಲಯ ಅರಣ್ಯ ಅಧಿಕಾರಿ ಮುಖ್ಯಮಂತ್ರಿ ಪದಕ ಪುರಸ್ಕೃತ ಬಿ ಅನಂತ ರಾಮು ರವರ ಮಗಳ ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಿಸಿ ಇತರರಿಗೆ ಮಾದರಿಯಾಗಿದ್ದಾರೆ.
ಕುಮಾರಿ ಹಿರಣ್ಮಯಿ ಕಳೆದ 15 ವರ್ಷಗಳಿಂದ ವೃದ್ಧಾಶ್ರಮ, ಅನಾಥಶ್ರಮ, ಅಂದರ ಶಾಲೆ, ಜ್ಯೋತಿಬಾಲ ಭವನ ಕೇಂದ್ರ ಮತ್ತು ಸಹೋದ್ಯೋಗಿಗಳಿಗೆ ಸಮವಸ್ತ್ರ ಹಾಗೂ ಅಪಘಾತ ವಿಮೆ ಮಾಡಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಬಂದಿದ್ದು, ಮಾನವೀಯ ಮೌಲ್ಯಗಳ, ಜೊತೆಗೆ ಜನರಲ್ಲಿ ಪರಿಸರ ಕಾಳಜಿ ಮೂಡಿಸುವ ಸಲುವಾಗಿ ಗಿಡಗಳನ್ನು ನೆಡಲಾಗುತ್ತಿದೆ. ಅದರಂತೆ ಈ ವರ್ಷವೂ ಕೊಳ್ಳೇಗಾಲದ ವಾಕ್ ಮತ್ತು ಶ್ರವಣ ನ್ಯೂನತೆಯ ಶಾಲೆಯಲ್ಲಿ ಗಿಡ ನೆಟ್ಟು ಊಟ ವ್ಯವಸ್ಥೆಯನ್ನು ಮಾಡಿ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಅನಂತರಾಮು ಅವರ ಪತ್ನಿ ಶ್ರೀಲಕ್ಷ್ಮಿ ರವರು ಎಲ್ಲಾ ಕಾರ್ಯಕ್ರಮಗಳಿಗೂ ಬೆನ್ನೆಲುಬಾಗಿ ನಿಂತು ಸಹಕರಿಸುತ್ತಿರುತ್ತಾರೆ
ಶ್ರೀಲಕ್ಷ್ಮಿ ಎಸ್. ಆರ್. ಸಂಸ್ಥೆಯ ಮೇಲ್ವಿಚಾರಕ ಸಂದೀಪ್, ಸುನಿಲ್ ಬಸಪ್ಪ ಬೆಳವಿ, ರಾಜು ಎಸ್, ಆಕಾಶ್ ಸೋಪಾನ ಜೋಶಿ, ಸುರೇಶ ಹಾಜರಿದ್ದರು.
ವರದಿ :ಸ್ವಾಮಿ ಬಳೇಪೇಟೆ


