ಗುರುಮಠಕಲ್ : ಪಟ್ಟಣದ ನಾರಾಯಣಪುರ ಓಣಿಯ ನಿವಾಸಿ ಸಂದೀಪ್ ಡಗೆ ಅವರ ಹೊಲದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಗಾಂಜಾ ಗಿಡಗಳನ್ನು ಜಪ್ತಿ ಮಾಡಿದ್ದಾರೆ.
ಗುರುಮಠಕಲ್ ಪಿ ಐ ದೌಲತ್ ಎನ್.ಕೆ. ಪೊಲೀಸ್ ಇನ್ಸ್ಪೆಕ್ಟರ್ ಅವರ ನೇತೃತ್ವದಲ್ಲಿ ಹಾಗೂ ಪಿ ಎಸ್ ಐ ಅಲ್ಲಾಭಕ್ಷ ಶಾಬಾದಿ ಪೊಲೀಸ್ ಉಪನಿರೀಕ್ಷಕ ಅವರ ತಂಡ ಕಾರ್ಯಾಚರಣೆ ನಡೆಸಿ ಹೊಲದಲ್ಲಿ ಬೆಳೆಸಲಾಗಿದ್ದ ಸುಮಾರು 365 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಈಸಂದರ್ಭದಲ್ಲಿ ಗ್ರೂಡ್ 2 ತಶೀಲ್ದಾರ್ ನರಸಿಂಹ ಸ್ವಾಮಿ ಮತ್ತು ಪೊಲೀಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ : ರವಿ ಬುರನೋಳ್

