ಬೆಂಗಳೂರು : ಸಿಎಂ ಡಿ.ಕೆ. ಶಿವಕುಮಾರ್ ಅವರು ಭಾನುವಾರ ತಮ್ಮ ಹುಟ್ಟೂರಿಗೆ ಭೇಟಿ ನೀಡಲಿದ್ದಾರೆ. ಕೃತಜ್ಞತಾ ಸಮರ್ಪಣೆಯ ಅಂಗವಾಗಿ ಇಂದು ಕನಕಪುರದ 22 ಸ್ಥಳಗಳಲ್ಲಿ ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ
ಸಿಎಂ ಆದ ಬಳಿಕ ಕನಕಪುರಕ್ಕೆ ನಾನೇ ಬರುತ್ತೇನೆ ಎಲ್ಲರೂ ಸಂಭ್ರಮಿಸೋಣ ಎಂದು ತಮ್ಮ ಕ್ಷೇತ್ರದ ಮತದಾರರಿಗೆ ಡಿ.ಕೆ.ಶಿವಕುಮಾರ್ ಎರಡು ದಿನಗಳ ಹಿಂದೆಯೇ ಸಂದೇಶ ನೀಡಿದ್ದರು. ಈಗ ಸಿಎಂ ಡಿ.ಕೆ. ಶಿವಕುಮಾರ್ ಆಗಮನದ ಅಂಗವಾಗಿ ಹುಟ್ಟೂರಿನಲ್ಲಿ ಹಬ್ಬದ ಕಳೆ ಮೂಡಿದೆ.
ಬೆಳಗ್ಗೆ 9.00 ಗಂಟೆಗೆ ತಮ್ಮ ಸದಾಶಿವನಗರದ ನಿವಾಸದಿಂದ ಹೊರಡಿಲಿರುವ ಡಿ.ಕೆ. ಶಿವಕುಮಾರ್ ರಾತ್ರಿ 10.30 ಕ್ಕೆ ಬೆಂಗಳೂರಿಗೆ ಮರಳಲಿದ್ದಾರೆ.
ನಡುವೆ ಹಾರೋಹಳ್ಳಿ ಸರ್ಕಲ್, ತುಂಗಣಿ, ಟಿ. ಬೇಕುಪ್ಪೆ ಸರ್ಕಲ್, ಕೋಡಿಹಳ್ಳಿ, ಹೇರಿಂದ್ಯಾಪನಹಳ್ಳಿ, ಕೊಳಗೊಂಡನಹಳ್ಳಿ, ಹುಣಸನಹಳ್ಳಿ, ಹೊಸದುರ್ಗ, ಕೋಡಿಹಳ್ಳಿ, ಹೂಕುಂದ, ಮುಳ್ಳಹಳ್ಳಿ, ನಲ್ಲಹಳ್ಳಿ, ದೊಡ್ಡ ಆಲಹಳ್ಳಿ, ಸಾತನೂರು, ಕಬ್ಬಾಳು, ಕುರುಬರ ಹಳ್ಳಿ, ಸೋಮದ್ಯಾಪನಹಳ್ಳಿ, ಹಳ್ಳಿಮಾರನಹಳ್ಳಿ, ಮೇಗಳಬೀದಿ, ಚನ್ನಬಸಪ್ಪ ಸರ್ಕಲ್ ಇಷ್ಟು ಸ್ಥಳಗಳಿಗೆ ಭೇಟಿ ನೀಡಿ ಎಲ್ಲೆಡೆ ಪ್ರತ್ಯೇಕವಾಗಿ ತಮ್ಮ ಅಭಿಮಾನಿಗಳಿಗೆ ಕೃತಜ್ಞತೆ ಸಮರ್ಪಿಸಲಿದ್ದಾರೆ.

