Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜುಲೈ 25-26ರಂದು ರಾಜ್ಯಾದ್ಯಂತ ಎಸ್‌ಐಆರ್ ಬಗ್ಗೆ ಅಭಿಯಾನ : ಬಿ. ವೈ ವಿಜಯೇಂದ್ರ 

Advertisement

ಶಿವಮೊಗ್ಗ: ಜುಲೈ 25-26ರಂದು ರಾಜ್ಯ ಬಿಜೆಪಿ ವತಿಯಿಂದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಎಸ್‌ಐಆರ್ ಬಗ್ಗೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.

ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಬಿಜೆಪಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜನಪ್ರತಿನಿಧಿಗಳ, ಕಾರ್ಯಕರ್ತರ ನೇತೃತ್ವದಲ್ಲಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ, ಎಸ್‌ಐಆರ್ ಕುರಿತು ಮನೆ ಮನೆಗೆ ತೆರಳಿ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

ಸುಮಾರು 1 ಕೋಟಿ ಮನೆಗಳಿಗೆ ಎಸ್‌ಐಆರ್ ಎನ್ಯೂಮರೇಷನ್ ಫಾರಂನ್ನು ವಿತರಿಸಲಾಗುವುದು. ಪ್ರತಿ ಕಾರ್ಯಕರ್ತನಿಗೆ ಕನಿಷ್ಠ 20 ಮನೆ ತಲುಪಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಚಿವ ಸಂಪುಟ ವಿಸ್ತರಣೆಯ ಕಸರತ್ತಿನಲ್ಲಿಯೇ ಮುಳುಗಿದ್ದು, ಅನಾವೃಷ್ಟಿಯಿಂದ ರಾಜ್ಯ ಎದುರಿಸುತ್ತಿರುವ ಭೀಕರ ಬರಗಾಲವನ್ನು ಎದುರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇವರು ಕೇವಲ ಕನಕಪುರಕ್ಕೆ ಮಾತ್ರ ಸಿಎಂ ಅಲ್ಲ, ಇಡೀ ರಾಜ್ಯಕ್ಕೆ ಸಿಎಂ ಆಗಿದ್ದೀರಿ. ರೈತರ ಸಮಸ್ಯೆಗಳಿಗೆ ಸ್ಪಂದಿಸಿ ತಕ್ಷಣ ಪರಿಹಾರ ಕಾರ್ಯಗಳನ್ನು ಕೈಗೊಳ್ಳಿ ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಮಳೆ ಇಲ್ಲದೆ ರೈತರು ಮುಗಿಲತ್ತ ಮುಖಮಾಡಿ ನಿಂತಿದ್ದಾರೆ. ಮುಖ್ಯಮಂತ್ರಿಗಳು ರೈತರ ಪರಿಸ್ಥಿತಿಯ ಬಗ್ಗೆ ಅಧ್ಯಯನವನ್ನೇ ಮಾಡಿಲ್ಲ. ಕೇವಲ ತಂಡ ಕಟ್ಟಿಕೊಂಡು ದೆಹಲಿ ಪ್ರವಾಸದಲ್ಲಿ ನಿರತರಾಗಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಬರದ ಕುರಿತು ಕೇವಲ ಪತ್ರಬರೆದು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ.

ಬಿಡದಿ ರಿಯಲ್ ಎಸ್ಟೇಟ್ ಬಗ್ಗೆ ಎಷ್ಟು ತಲೆಕೆಡಿಸಿಕೊಂಡಿದ್ದಾರೋ ಅಷ್ಟೇ ರೈತರ ಬಗ್ಗೆ ಕಾಳಜಿವಹಿಸಿದ್ದರೆ ಬರದ ಸಮಸ್ಯೆ ಎಷ್ಟೋ ನೀಗುತ್ತಿತ್ತು ಎಂದು ವ್ಯಂಗ್ಯವಾಡಿದರು.

 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆಕ್ರಮ ಪಡಿತರ ಹಕ್ಕಿ ದಂಧೆ ಕೋರರನ್ನು ಬಂಧಿಸಲು ಡಿಎಸ್ಎಸ್ ಅಗ್ರಹ!ವಿದ್ಯಾರ್ಥಿಪರ ಧ್ವನಿ ಎತ್ತಿದ  ರಾಜ್ಯ ಬಿಜೆಪಿ ಎಸ್ ಟಿ  ಮೋರ್ಚ ಕಾರ್ಯಕಾರಿಣಿ  ಸಮಿತಿಯ ಸದಸ್ಯ ರಾಜುಅಧಿಕಾರಿದಿಂದ ಕೆಳಗಿಳಿದ ದೇಶದ ಅತಿ ಕಿರಿಯ ನಗರಸಭಾಧ್ಯಕ್ಷೆಯಾಗಿದ್ದ ದಿಯಾ ಜುಲೈ 25-26ರಂದು ರಾಜ್ಯಾದ್ಯಂತ ಎಸ್‌ಐಆರ್ ಬಗ್ಗೆ ಅಭಿಯಾನ : ಬಿ. ವೈ ವಿಜಯೇಂದ್ರ ಹೆದ್ದಾರಿಗಳಲ್ಲಿ ಅಪಘಾತಕ್ಕೀಡಾಗುವ ಅಪರಿಚಿತ ವ್ಯಕ್ತಿಗಳಿಗೆ ಉಚಿತ ಚಿಕಿತ್ಸೆ : ಯು. ಟಿ ಖಾದರ್ ಘೋಷಣೆ ದಾಂಪತ್ಯ ಜೀವನದಲ್ಲಿ ಆಸಕ್ತಿ ಇಲ್ಲ ಎಂದು ವಿಚ್ಛೇದನ ಪಡೆಯುವಂತಿಲ್ಲ : ಹೈಕೋರ್ಟ್ಭಾರತ- ಜಿಂಬಾಬ್ವೆ ಮೊದಲ ಟ್ವೆಂಟಿ-೨೦ ಜುಲೈ ೨೩ ರಂದುಐ ಕ್ಯಾನ್ ಹಿಟ್ ಪ್ರಾಂ ಬೌಲ್ ಒನ್ಅಚಾನಕ್ಕಾಗಿ ಮನೆಯಿಂದ ಬೆಳ್ಳಿ ಕಳಶ ನಾಪತ್ತೆ : ಬೇಡಿದ 48 ಗಂಟೆಗಳಲ್ಲಿ ವಾಪಸ್ ಕರೊನಾ ವೈರಸ್ ಸಾವಿರ ವರ್ಷಗಳಾದರೂ ಇರುತ್ತೆ ಭಯ ಪಡುವ ಅಗತ್ಯವಿಲ್ಲ : ಯು. ಟಿ ಖಾದರ್