ಬೇರೆಯವರಿಗೆ ಸಹಾಯ ಮಾಡಲಿಕ್ಕೆ ಹೋಗಿ ಅಪಘಾತವಾಗಿ ಇಬ್ಬರು ಪ್ರಾಣ ಕಳೆದುಕೊಂಡ ಸ್ನೇಹಿತರ ನೆನಪಿಗಾಗಿ ಅನ್ನದಾನ ಕಾರ್ಯಕ್ರಮ
ಬಾಗೇಪಲ್ಲಿ: ಪಟ್ಟಣ ವಾಲ್ಮೀಕಿ ನಗರದಲ್ಲಿನ ನಿವಾಸಿಗಳು ರಾಜಶೇಖರ ಮತ್ತು ರಾಜು ಎಂಬವರು ಇತ್ತೀಚೆಗೆ ಅಪಘಾತದಲ್ಲಿ ಮರಣ ಹೊಂದಿದ್ದು ಅವರ ನೆನಪಿಗಾಗಿ ಅವರ ಸ್ನೇಹಿತರಿಂದ ಗೂಳೂರು ವೃತ್ತದಲ್ಲಿ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆಯಲ್ಲಿ ಯುವ ಮುಖಂಡರಾದ ದಿವಾಕರ .ಎನ್. ರವರು ಮಾತನಾಡಿ, ಕೆಲವು ದಿನಗಳ ಹಿಂದೆ ವಾಲ್ಮೀಕಿ ನಗರದ ರಾಜಶೇಖರ ಮತ್ತು ರಾಜು ಎಂಬವರು ಬಾಗೇಪಲ್ಲಿಯಿಂದ ಹೈದರಾಬಾದ್ ಗೆ ತರಕಾರಿಯನ್ನು ವಾಹನದಲ್ಲಿ ಸಾಗಿಸುತ್ತಿರುವ ಸಮಯದಲ್ಲಿ ಇವರ ಜೊತೆಗೆ ಬಂದಂತಹ ಮತ್ತೊಂದು ವಾಹನ ಟೈರ್ ಪಂಚರ್ ಆದ ಸಂದರ್ಭದಲ್ಲಿ ಅವರಿಗೆ ಸಹಾಯ ಮಾಡಲು ಹೋದ ರಾಜಶೇಖರ ಮತ್ತು ರಾಜು ಎಂಬವರು ಅಪಘಾತವಾಗಿ ಸ್ಥಳದಲ್ಲಿಯೇ ಮರಣ ಹೊಂದಿರುತ್ತಾರೆ. ಅದ್ದರಿಂದ ಅವರ ನೆನಪಿಗಾಗಿ ಸ್ನೇಹಿತರಾದ ನಾವುಗಳು ಅನ್ನದಾನ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ.
ಎಂದರು.
ಈ ಸಂದರ್ಭದಲ್ಲಿ ಎರಡನೇ ವಾರ್ಡಿನ ತೇಜು, ಶ್ರೀನಾಥ್ ಕಾರ್ತಿಕ್ ಶರ್ಮಾ, ನಾಗರಾಜ, ನವೀನ್ ಕುಮಾರ್ ಎಸ್ ಎಂ, ಸುರೇಂದ್ರ ರೆಡ್ಡಿ,ನರೇಶ್ ಕುಮಾರ್ ಮುಂತಾದವರು ಹಾಜರಿದ್ದರು.
ವರದಿ: ಬಿ.ಎ.ಬಾಬಾಜಾನ್

