ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಆರ್.ವಿ.ದೇಶಪಾಂಡೆ, ಸಚಿವನಾಗುವ ಆಸೆಯಿಲ್ಲ, ಸಚಿವನಾಗಿ ದಣಿದಿದ್ದೇನೆ, ಸಿಎಂ ಆಗಬೇಕಷ್ಟೇ.ಸಿದ್ದರಾಮಯ್ಯನವರು ಅನುಮತಿ ಕೊಟ್ರೆ ಸಿಎಂ ಆಗ್ತೀನಿ ಎಂದರು.
ಹಾಗಂತ ಸಿಎಂ ಬದಲಾವಣೆಯ ಪ್ರಶ್ನೆ ಇಲ್ಲ. ಅಂತಹ ಚರ್ಚೆಯೂ ನಡೆಯುತ್ತಿಲ್ಲ. ಜೀವನದಲ್ಲಿ ಮಹತ್ವಾಕಾಂಕ್ಷೆ ಇರಬೇಕು. ಸಿದ್ದರಾಮಯ್ಯ ಅವರಿಗಿಂತ ವಯಸ್ಸಿನಲ್ಲಿ ನಾನು ದೊಡ್ಡವನು. ರಾಜಕೀಯವಾಗಿಯೂ ಸಾಕಷ್ಟು ಅನುಭವವಿದೆ. ಹೈಕಮಾಂಡ್ ಹುದ್ದೆಕೊಟ್ಟರೂ ಸಿದ್ದರಾಮಯ್ಯ ಅನುಮತಿ ಕೊಡ್ಬೇಕು. ಅವರು ಅನುಮತಿ ಕೊಟ್ರೇ ಸಿಎಂ ಆಗ್ತೀನಿ ಎಂದು ಹೇಳಿದರು.

