
ನಗರದಲ್ಲಿ ಮಾತನಾಡಿದ ಅವರು ಅಂದು ಬೆ. 9 ರಿಂದ 4 ಗಂಟೆಯವರೆಗೆ ಉದ್ಯೋಗ ಮೇಳ ಇರಲಿದ್ದು, ನಿರುದ್ಯೋಗ ಸಮಸ್ಯೆ ಹೋಗಲಾಡಿಸುವ ಉದ್ದೇಶದಿಂದ ಸತತ ೫ ನೇ ಬಾರಿಗೆ ಗ್ರಾಮೀಣ ಭಾಗದಲ್ಲಿ ಉದ್ಯೋಗ ಮೇಳ ವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಉದ್ಯೋಗ ಮೇಳದಲ್ಲಿ ಎಸ್.ಎಸ್.ಎಲ್. ಸಿ, ಪಿಯಿಸಿ, ಐಟಿಐ, ಡಿಪ್ಲೊಮಾ, ಪದವಿ ವಿದ್ಯಾರ್ಹತೆ ಹೊಂದಿರುವ ಆಸಕ್ತ ವಿದ್ಯಾರ್ಥಿಗಳು ಸಂದರ್ಶನದಲ್ಲಿ ಭಾಗಿಯಾಗಬಹುದು ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮಾಜಿ ಶಾಸಕರು ಹಾಗೂ ಸಿ.ಆಯ್.ಸಿ.ಗ್ರಾ.ಶಿ.ಸಂ ಅಧ್ಯಕ್ಷರಾದ ಎಸ್.ಐ. ಚಿಕ್ಕನಗೌಡ್ರ ಅವರು ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆಂದರು.ಈ ಸಂದರ್ಭದಲ್ಲಿ ಸಿ.ಆಯ್.ಸಿ ಗ್ರಾ.ಶಿ.ಸಂ. ಆಡಳಿತಧಿಕಾರಿ ಎಸ್.ಟಿ. ಭೈರಪ್ಪನವರ, ಎಸ್.ಎಮ್. ಕಳಸೂರ, ಎಂ.ಕಾಂ. ವಿಭಾಗದ ಮುಖ್ಯಸ್ಥರಾದ ಸಿ.ಎಸ್.ಭರಮಗೌಡ್ರ, ರಾಜು ಪಾಟೀಲ್ ಪಾಲ್ಗೊಂಡಿದ್ದರು.
ವರದಿ:-ಸುಧೀರ್ ಕುಲಕರ್ಣಿ

