Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನನ್ನತ್ರ ಇರುವಂತಹ ದಾಖಲೆಗಳು ರಿಲೀಸ್ ಮಾಡಿದ್ರೆ 8 ಮಂದಿ ಮಂತ್ರಿಗಳು ರಾಜೀನಾಮೆ : ಕುಮಾರಸ್ವಾಮಿ 

Advertisement

ಬೆಂಗಳೂರು : ಸಿದ್ದರಾಮಯ್ಯನವ್ರೇ ನಿಮ್ಮಿಂದ ಸರ್ಟಿಫಿಕೇಟ್ ಬೇಕಿಲ್ಲ. ತಪ್ಪು ಸಾಬೀತಾದರೆ ನಾನೇ ರಾಜೀನಾಮೆ ಕೊಡ್ತೇನೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಕೆಂಡಕಾರಿದ್ದಾರೆ.


ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ,ನಾನು ಇಲ್ಲಿಗೆ ಯಾವುದೇ ತಪ್ಪು ಮಾಡಿ ಬಂದಿಲ್ಲ, ಅಧಿಕಾರದಲ್ಲಿ ಇದ್ದಾಗ ಅಧಿಕಾರ ದುರುಪಯೋಗ ಮಾಡಿಕೊಳ್ಳುವ ವ್ಯಕ್ತಿ ನಾನಲ್ಲ.


ನಿಮ್ಮದು ಬರೀ ದ್ವೇಷದ ರಾಜಕರಣ. ನಿಮ್ಮ ಸಂಪುಟದಲ್ಲಿ ದರೋಡೆಕೊರರೇ ತುಂಬಿದ್ದಾರೆ.ನೀವು ಪಾರದರ್ಶಕ ಆಡಳಿತ ಕೊಡುವುದರಲ್ಲಿ ವಿಫಲರಾಗಿದ್ದೀರಿ ಎಂದು ಟೀಕಿಸಿದರು.


ಗಂಗೇನಹಳ್ಳಿ ಡಿನೋಟಿಫಿಕೇಷನ್ ನಲ್ಲಿ ತಪ್ಪೇ ಮಾಡಿಲ್ಲ. ಯಾವ ಪ್ರಕರಣದಲ್ಲೂ ನನ್ನನ್ನು ಸಿಲುಕಿಸಲಾಗಲ್ಲ. ನಂಗೆ ಭಯವೇ ಇಲ್ಲ. ಕೊತ್ವಾಲನ ಜತೆಗಿದ್ದವರು ಆಡಳಿತ ನಡೆಸ್ತಿದ್ದಾರೆ . ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಆಡಳಿತಯಂತ್ರ ಸಂಪೂರ್ಣ ಕುಸಿದಿದೆ. ದ್ವೇಷ ರಾಜಕಾರಣಕ್ಕೆ ಹೆದರಲ್ಲ. ಯಾವುದೇ ತನಿಖೆ ನಡೆಸಿದರೂ ಏನೂ ಮಾಡೋಕೆ ಆಗೋದಿಲ್ಲ ಅಂತ ಹೇಳಿದ್ದಾರೆ.


ಹಿಟ್ ಅಂಡ್ ರನ್ ಮಾಡೋದಿಲ್ಲ . ದೇವೇಗೌಡ್ರ ಕುಟುಂಬ ಕೆದಕಿದ್ರೆ, ಏನಾಗುತ್ತೆ ಕಾದು ನೋಡಿ. ನನ್ನತ್ರ ಇರುವಂತಹ ದಾಖಲೆಗಳು ರಿಲೀಸ್ ಮಾಡಿದ್ರೆ 8 ಮಂದಿ ಮಂತ್ರಿಗಳು ರಾಜೀನಾಮೆ ನೀಡುತ್ತಾರೆ ಎಂದು ಭವಿಷ್ಯ ನುಡಿದ್ರು. ಸಿದ್ದರಾಮಯ್ಯ ಹೆದರಲ್ಲ ಅಂತಿದ್ದಾರೆ.


ದೇವೇಗೌಡ್ರ ಕಣ್ಣಲ್ಲಿ ನೀರು ಹಾಕಿಸಿದ್ರೆ ಒಳ್ಳೆದಾಗಲ್ಲ. ಈ ಸರ್ಕಾರ ಭಸ್ಮ ಆಗುವ ಕಾಲ ದೂರ ಇಲ್ಲ ಎಂದು ಕಿಡಿಕಾರಿದ್ರು. ಸಿದ್ದರಾಮಯ್ಯ ಗೆ ರಾತ್ರಿ ನಿದ್ದೆ ಬರ್ತಿಲ್ಲ. 2 ಗಂಟೆಗೆ ಎದ್ದು ಡಾಕ್ಟರ್ ಕರೆಸಿ ಮಾತಾಡಿದ್ದಾರೆ. ರಾತ್ರಿ ಎದ್ದವರು ಮಲಗಲು ಹೆಣಗಾಡುತ್ತಿದ್ದಾರೆ. ಇಷ್ಟಾದರೂ ನಾನು ಹೆದರಲ್ಲ,ನಾನು ಹೆದರಲ್ಲ ಎಂದು ಹೇಳಿಕೆ ನೀಡಿ ತಪ್ಪು ಮುಚ್ಚಿಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ