
ದೇವರಿಗೆ ಮಹಾಪೂಜೆಯ ನಂತರ ಶ್ರೀಗಳ ಪಾದದೊಂದಿಗೆ ಆರತಿ ಅಬ್ದಾಗಿರಿ, ತಾಳ ಮೃದಂಗಗಳ ವಾದ್ಯಗಳೊಂದಿಗೆ ನರ್ತಿಸುತ್ತಾ ದಿಂಡಿ ಹೊರಡಿಸಲಾಗಿತ್ತು. ಪಟ್ಟಣದ ಪ್ರಮುಖ ರಸ್ತೆಗಳಿಂದ ಸಾವಿರಾರು ಭಕ್ತರ ಮಧ್ಯೆ ಹಾಡು ನೃತ್ಯದೊಂದಿಗೆ ದೂದಗಂಗಾ ನದಿಗೆ ತೆರಳಿ ಅಲ್ಲಿ ಪೂಜಾ ಸಾಹಿತ್ಯಗಳನ್ನು ಸ್ವಚ್ಛಗೊಳಿಸಿ ಆರತಿ ಮಾಡಿ ಉಪಸ್ಥಿತರಿದ್ದ ಭಕ್ತರಿಗೆ ಪಂಚಾಮೃತ ಅಭಿಷೇಕ ಹಂಚಿ ಅಲ್ಲಿಂದ ಪುನಃ ಪಟ್ಟಣದ ವಿಠ್ಠಲ ರುಕ್ಮಿಣಿ ಮಂದಿರಕ್ಕೆ ಆಗಮಿಸಲಾಯಿತು. ನಂತರ ಸಾಯಂಕಾಲ ಮಹಾಪ್ರಸಾದ್ ದೊಂದಿಗೆ ಉತ್ಸವ ಮುಕ್ತಾಯಗೊಂಡಿತು. ಸದರಿ ಉತ್ಸವದಲ್ಲಿ ಸುತ್ತಲಿನ ಹತ್ತು ಹಳ್ಳಿಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ವರದಿ:-ಮಹಾವೀರ ಚಿಂಚಣೆ.

