Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರೀ ಶರಣ ಹೂಗಾರ ಮಾದಯ್ಯ ಜಯಂತಿ ಆಚರಣೆ

Advertisement
ಕಲಘಟಗಿ: -“ಆತ್ಮಕಲ್ಯಾಣ ಮತ್ತು ಲೋಕಕಲ್ಯಾಣದ ಸಾಧನವಾಗುವ ಬಸವಣ್ಣನವರ ಅನುಭವ ಮಂಟಪದಲ್ಲಿ ಹೂಗಾರ ಮಾದಯ್ಯನವರು ಕಾಯಕ ಮತ್ತು ದಾಸೋಹವನ್ನು ಕೈಗೊಂಡು ಮಹಾನ ಶರಣರಾಗಿದ್ದರು” ಎಂದು ಪತ್ರಕರ್ತ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಪ್ರ.ಕಾರ್ಯದರ್ಶಿ ಗಿರೀಶ ಮುಕ್ಕಲ್ಲ ಹೇಳಿದರು.

ಅವರು ಪಟ್ಟಣ ಹನುಮಂತ ದೇವಸ್ಥಾನದಲ್ಲಿ ಹೂಗಾರ ಸಮಾಜವು ಆಯೋಜಿಸಿದ್ದ ಶರಣ ಹೂಗಾರ ಮಾದಯ್ಯನವರ ಜಯಂತಿಯಲ್ಲಿ ಮಾತನಾಡಿ, “ಶರಣ ಹೂಗಾರ ಮಾದಯ್ಯ ದಂಪತಿ ವಿಶ್ವಗುರು ಬಸವಣ್ಣನವರ ಕಲ್ಯಾಣದ ಮಹಾಮನೆಗೆ ನಿತ್ಯ ಇಷ್ಟಲಿಂಗ ಪೂಜೆಗೆ ಪತ್ರ ಹಾಗೂ ಪುಷ್ಪಗಳನ್ನು ತರುತ್ತಿದ್ದರು. ನಿತ್ಯ ಕಾಯಕ ಮಾಡುವಾಗ ಸಮಾನತೆಯ ವಚನಗಳನ್ನು ಓದುವುದು, ಕಾಯಕ, ದಾಸೋಹ, ಲಿಂಗಾಂಗಯೋಗ, ಪ್ರಸಾದ ಮತ್ತು ಧರ್ಮಗಳ ಬಗ್ಗೆ ಚಿಂತನೆ ನಡೆಸುತ್ತಿದ್ದರು” ಎಂದರು.

“ಪ್ರತಿ ವರ್ಷ ಅನಂತನ ಹುಣ್ಣಿಮೆಯಂದು ಹೂಗಾರ ಮಾದಯ್ಯ ಜಯಂತಿ ಆಚರಿಸಲಾಗುತ್ತಿದೆ. ಬಸವಾದಿ ಶರಣರಲ್ಲಿ ಹೂಗಾರ ಮಾದಯ್ಯನವರೂ ಕೂಡ ಒಬ್ಬ ಶರಣರು. 12ನೇ ಶತಮಾನದಿಂದಲೇ ಹೂಗಾರ ವೃತ್ತಿ ಶರಣಕುಲಕ್ಕೆ ಮತ್ತು ಸಮಾಜಕ್ಕೆ ಪುಷ್ಪ ಮತ್ತು ಬಿಲ್ವಪತ್ರೆಯನ್ನು ಪೂಜೆಗೆ ಒದಗಿಸುತ್ತ ಬಂದಿದೆ” ಎಂದರು. ನಂತರ ಹೂಗಾರ ಮಾದಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಸಮಾಜದ ಹಿರಿಯರಾದ ಶಂಭುಲಿಂಗ ಹೂಗಾರ, ಮಂಜುನಾಥ ಪೂಜಾರ, ಸಿದ್ದಪ್ಪ ಮುಕ್ಕಲ್ಲ, ಗುರುಶಾಂತವ್ವ ಪೂಜಾರ, ಕಮಲವ್ವ ಪೂಜಾರ, ಈಶ್ವರಿ ಮುಕ್ಕಲ್ಲ, ಸೋಮಶೇಖರ ಪೂಜಾರ, ಲಕ್ಷ್ಮೀ ಮುಕ್ಕಲ್ಲ, ಮಹದೇವಪ್ಪ ಹೂಗಾರ, ವೈಜನಾಥ ಹೂಗಾರ ಸೇರಿದಂತೆ ಶ್ರೀಹೂಗಾರ ಮಾದಯ್ಯನವರ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಹೂಗಾರ ಸಮಾಜ ಬಾಂಧವರು ಇದ್ದರು.ಚಿತ್ರ ಇದೆ : 18-ಕೆ.ಎಲ್.ಜಿ-3 : ಕಲಘಟಗಿಯಲ್ಲಿ ಶರಣ ಹೂಗಾರ ಮಾದಯ್ಯ ಜಯಂತಿ ಆಚರಣೆ

ವರದಿ :-ಶಶಿಕುಮಾರ ಕಟ್ಟಿಮನಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ