ಸಿಂಧನೂರು : ಮುನಿಯಪ್ಪ ರವರಿಗೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಖಾತೆ ನೀಡಬೇಕೆಂದು ಹಾಗೂ ರಾಯಚೂರು ವಿಧಾನ ಪರಿಷತ್ ಶಾಸಕ ಎ.ವಸಂತಕುಮಾರ್ ರವರಿಗೆ ಸಚಿವ ಸ್ಥಾನ ನೀಡುವಂತೆ ಮಾದಿಗ ದಂಡೋರ (ಎಂಆರ್ಪಿಎಸ್) ತಾಲ್ಲೂಕು ಸಮಿತಿ ಯಿಂದ ಪ್ರತಿಭಟಿಸಿ
ಉಪ ತಹಶೀಲ್ದಾರ ಅಂಬದಾಸ್ ಮೂಲಕ ಸನ್ಮಾನ್ಯ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ರವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ :ದಲಿತ ಮುಖಂಡರಾದ, ಗುರುರಾಜ ಮುಕ್ಕುಂದಾ, ಮರಿಯಪ್ಪ ಬಿ ಎಸ್ ಪಿ, ಶಿವರಾಜ ಉಪ್ಪಲದೊಡ್ಡಿ ಸೇರಿದಂತೆ ಅನೇಕರು ಮಾತನಾಡಿ ಕೆ ಎಚ್. ಮುನಿಯಪ್ಪ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಹಾಗೂ ಪ್ರಾಮಾಣಿಕ ಕಾರ್ಯಕರ್ತರಗಿ 7ಬಾರಿ ಸಂಸದರಾಗಿ ಕೇಂದ್ರ ಸಚಿವರಾಗಿ ಮತ್ತು ರಾಜ್ಯ ಸಚಿವರಾಗಿ ಕರ್ತವ್ಯ ನಿರ್ವಹಿಸುವ ಜೊತೆಗೆ ಪ್ರತಿ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ ಶ್ರಮಿಸಿದ್ದಾರೆ ಅದರಂತೆ ಎಂಎಲ್ಸಿ ಎ.ವಸಂತ್ ಕುಮಾರ ಅವರು ಕಾಂಗ್ರೆಸ್ ಪಕ್ಷ ನೀಡುವ ಪ್ರತಿಯೊಂದು ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ ವರಿಷ್ಠರು ಇದನ್ನು ಮನಗೊಂಡು ಸಚಿವ ಸಂಪುಟದಲ್ಲಿ ಈ ಇಬ್ಬರಿಗೂ ಒಳ್ಳೆ ಸ್ಥಾನಮಾನ ನೀಡಬೇಕೆಂದು ಆಗ್ರಿಸಿದರು.
ಈ ವೇಳೆ :ತಾಲೂಕ ಅಧ್ಯಕ್ಷ ಚಿಕ್ಕೋರಪ್ಪ ತುರುವಿಹಾಳ. ಉಪಾಧ್ಯಕ್ಷ ಮಲ್ಲಿಕಾರ್ಜುನ ಹತ್ತಿಗುಡ್ಡ. ಪ್ರಧಾನ ಕಾರ್ಯದರ್ಶಿ ಯಮನೂರು ಬಸಾಪುರ ಕೆ. ಸಹ ಕಾರ್ಯದರ್ಶಿ ಹನುಮೇಶ್ ದುಮತಿ. ಕೃಷ್ಣಪ್ಪ. ಮಾರುತಿ. ವೆಂಕಟೇಶ್ ಬೋವಿ. ಶರಣಪ್ಪ ಹಂಚಿನಾಳ. ಮುದುಕಪ್ಪ ಟೇಲರ್ ಸೇರಿದಂತೆ ಇನ್ನು ಅನೇಕರು ಉಪಸ್ಥಿತರಿದ್ದರು.
ವರದಿ : ಬಸವರಾಜ ಬುಕ್ಕನಹಟ್ಟಿ.

