
ಸಂಜೆ ಕಳಸಾರೋಹಣ ಕಾರ್ಯಕ್ರಮ ಜರುಗಿತು. ನಾನಾ ಸಾಂಸ್ಕೃತಿಕ ತಂಡಗಳು ಮೆರವಣಿಗೆಗೆ ಮೆರಗು ತಂದವು. ಅಲಂಕೃತ ವಾಹನದಲ್ಲಿ ಆಂಜನೇಯನ ಭಾವಚಿತ್ರ ಪ್ರತಿಷ್ಠಾಪಿಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ,, ಪುರಸಭೆ ಸದಸ್ಯರಾದ ದುರುಗಪ್ಪ ಕಟ್ಟಿಮನಿ,ಆನಂದ ಪೇಂಟರ್, ಬಸವರಾಜ ಬಂಕದಮನಿ, ಪರಶುರಾಮ್ ಕಟ್ಟಿಮನಿ ಜೆ.ಇ , ಶರಣಪ್ಪ ಕಟ್ಟಿಮನಿ, ವೆಂಕಟೇಶ, ರವಿ ಕಟ್ಟಿಮನಿ, ವೆಂಕಟೇಶ ಹಿರೇಮನಿ, ರಾಘ ಕುದುರಿ, ಮೌನೇಶ ಭಂಡಾರಿ ,ಹುಲೇಶ ,ಅಮರೇಶ ಪೇಂಟರ್ ,ಹನುಮಂತ ಬಡಿಗೇರ್ ,ರಾಮಪ್ಪ ಬಂಕದ ಮನಿ ಸಮಾಜದ ಇತರರು ಇದ್ದರು.
ವರದಿ: ಮಂಜುನಾಥ ಕುಂಬಾರ

