ಚಿಂಚೋಳಿ : ಪಟ್ಟಣದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135 ನೇ ಜಯಂತಿ ಹಾಗೂ ಮೂರ್ತಿ ಅನಾವರಣ ಕಾರ್ಯಕ್ರಮದ ಪ್ರಯುಕ್ತವಾಗಿ ಶ್ರೀ ಮಂಜುನಾಥ್ ಕೊರವಿ ಆರ್ಟಿಓ ಅವರು ದಿನಾಂಕ 26.4.2026 ರಂದು ರವಿವಾರ ಸಮಯ ಬೆಳಿಗ್ಗೆ 11ಗಂಟೆ ಡಾ.ಬಿ.ಆರ್.ಅಂಬೇಡ್ಕರ್ ಭವನ್ ಚಿಂಚೋಳಿಯಲ್ಲಿ ತಾಲೂಕಿನ ಎಡ ಮತ್ತು ಬಲ ಸಮುದಾಯದ ಹಿರಿಯ ಮುಖಂಡರ ಸಮ್ಮುಖದಲ್ಲಿ ಸಭೆ ಕರೆಯಲಾಗಿದೆ ಹಾಗಾಗಿ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಚಿಂಚೋಳಿಯಲ್ಲಿ ಎಡ.ಮತ್ತು ಬಲ ಎಂಬ ಒಡಕು ತಡೆಗಟ್ಟಲು ತಾಲೂಕಿನ ಎರಡು ಸಮುದಾಯದ ಮುಖಂಡರು ಸಭೆಯಲ್ಲಿ ಭಾಗವಹಿಸಿ ಮುಕ್ತವಾಗಿ ಚರ್ಚೆ ಮಾಡಿ ಅದರ ಸಾಧಕ ಬಾದಕಗಳ ಬಗ್ಗೆ ಸಭೆಯಲ್ಲಿ ಎಲ್ಲರೂ ಮುಕ್ತವಾಗಿ ಚರ್ಚೆ ಮಾಡೋಣ ಅದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತಮ್ಮಲ್ಲಿ ವಿನಂತಿ.
ವರದಿ : ಸುನೀಲ ಸಲಗರ

