ಚಿಟಗುಪ್ಪ:ಲೋಕಸಭಾ ಸದಸ್ಯರಾಗಿ ಹಾಗೂ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ ಕೆ.ಎಚ್.ಮುನಿಯಪ್ಪ ಅವರನ್ನು ಉಪಮುಖ್ಯಂತ್ರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ ಚಿಟಗುಪ್ಪ ತಾಲ್ಲೂಕಿನ ಮನ್ನಾಏಖೇಳಿ ಗ್ರಾಮದ ಡಾ.ಅಂಬೇಡ್ಕರ್ ವೃತ್ತದ ಹತ್ತಿರ ಮಾದಿಗ ದಂಡೋರಾ ಹೋರಾಟ ಸಮಿತಿ ಬೀದರ ದಕ್ಷಿಣ ಹಾಗೂ ಮಾದಿಗ ಸಮುದಾಯ ಒಕ್ಕೂಟ ಬೀದರ ದಕ್ಷಿಣ ಕ್ಷೇತ್ರದ ವತಿಯಿಂದ
ಶನಿವಾರ ಪ್ರತಿಭಟನೆ ನಡೆಸಲಾಯಿತು.
ಕೆ.ಎಚ್.ಮುನಿಯಪ್ಪ ಅವರು ಕಳೆದ ನಲವತ್ತು ವರ್ಷಗಳಿಂದ ಕಾಂಗ್ರೇಸ್ ಪಕ್ಷದಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಾ ಬಂದಿರುತ್ತಾರೆ.ಏಳು ವರ್ಷಗಳ ಕಾಲ ಲೋಕಸಭಾ ಸದಸ್ಯರಾಗಿ, ಕೇಂದ್ರ ಸರ್ಕಾರದ ಕೇಂದ್ರೀಯ ಮಂತ್ರಿಗಳಾಗಿ ಸೇವೆ ಸಲ್ಲಿಸಿರುತ್ತಾರೆ.ಇಂತಹ ಹಿರಿಯ ರಾಜಕಾರಣಿಯನ್ನು ಡಿ.ಕೆ ಸಂಪುಟದಲ್ಲಿ ಪ್ರಬಲ ಖಾತೆ ನೀಡದೆ ಈ ಹಿಂದೆ ಇದ್ದ ಆಹಾರ ಖಾತೆಯನ್ನೆ ಪುನಃ ನೀಡಿರುವುದು ಮಾದಿಗರಿಗೆ ಅವಮಾನ ಮಾಡಿದಂತಿದೆ.ಮಾದಿಗ ಸಮುದಾಯದ ಅಭಿವೃದ್ಧಿಗಾಗಿ ಮುನಿಯಪ್ಪಗೆ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವರನ್ನಾಗಿ ಮಾಡಬೇಕೆಂದು ಎಂದು ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ ಸಿಬ್ಬಂದಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾದಿಗ ದಂಡೋರ ಒಳಮೀಸಲಾತಿ ಹೋರಾಟ ಸಮಿತಿ ಬೀದರ ದಕ್ಷಿಣ ಕ್ಷೇತ್ರದ ಅಧ್ಯಕ್ಷ ವೀರಾಶೇಟ್ಟಿ ಬಂಬಳಗಿ,ಉಪಾಧ್ಯಾಕ್ಷ ದಯಾನಂದ ರೇಕುಳಗಿ,ಮಾದಿಗ ದಂಡೋರ ಹೋರಾಟ ಸಮಿತಿ ಚಿಟಗುಪ್ಪ ತಾಲ್ಲೂಕು ಅಧ್ಯಕ್ಷ ಲಾಲಪ್ಪ ರಾಂಪುರೆ ನಿರ್ಣಾ,ಪದಾಧಿಕಾರಿಗಳಾದ ಉಮೇಶ ಬಗದಲ,ಶಾಲಿವಾನ ಬೋರಾಳ,ವೀರಶೈಟ್ಟಿ ಬಂಬುಳಗಿ,ಬಸವರಾಜ ನಿರ್ಣಾ,ವಿನೋದ ಮಂಗಲಗಿ,ರಾಮಚಂದ್ರ ಬೋರಾಳ,ಧನರಾಜ ಮಂಗಲಗಿ,ಪ್ರಹ್ಲಾದ ಮೇಲಕೇರಿ ಮಾಡಗುಳ,ಲಕ್ಷ್ಮಣ ಮಚಕುರೆ,ಯೋಹಾನ ಬಗದಲ,ಮನೋಜ ಬೋರಾಳ,ಪ್ರಭು ಬಂಬುಳಗಿ,ಆದರ್ಶ ಬೋರಾಳ ಸೇರಿ ಇತರರು ಉಪಸ್ಥಿತರಿದ್ದರು.
ವರದಿ :ಸಜೀಶ ಲಂಬುನೋರ

