Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗುರುಚನ್ನಬಸವ ಮಹಾಸ್ವಾಮಿಗಳ ಜಾತ್ರೆಯ ಪ್ರಚಾರ ಸಾಮಗ್ರಿ ಬಿಡುಗಡೆ

Advertisement
ಐಗಳಿ : ಸಮೀಪದ ಬಿಳೂರ ಗ್ರಾಮದ ಪ ಪೂ ಶ್ರೀ ಮನಿಪ್ರ ರಾಜಯೋಗಿ ಗುರುಬಸವ ಮಹಾಶಿವಯೋಗಿಗಳವರ ಜಾತ್ರೆಯು ಶ್ರೀ ಮಠದ ಪೀಠಾಧಿಪತಿಗಳಾಗಿರುವ ಪಪೂ ಶ್ರೀ ಮನಿಪ್ರ ಗುರುಚನ್ನಬಸವ ಮಹಾಸ್ವಾಮಿಗಳ ಜಾತ್ರೆಯ ಪ್ರಚಾರ ಸಾಮಗ್ರಿ ಬಿಡುಗಡೆ ಮಾಡಿದರು.

ನಂತರ ಮಾತನಾಡಿ, ಗುರುಬಸವ ಮಹಾಶಿವಯೋಗಿಗಳು ಕುಸ್ತಿ ಪಟುವಾಗಿ ಅಲ್ಲದೇ ಕೃಷಿ ಚಟುವಟಿಕೆ ತೊಡಗಿಸಿಕೊಂಡು ಈ ನಾಡಿನಲ್ಲಿ ಗುರುತಿಸಿಕೊಂಡಿದ್ದರು, ಅವರು ಮಾಡಿದ ಅನೇಕ ಪವಾಡಗಳು ಇಂದಿಗೂ ಎಲ್ಲರಿಗೂ ಮಾದರಿಯಾಗಿವೆ. ಇದೇ ಏಪ್ರಿಲ್ ದಿ ೨೧ ರಿಂದ ಮೇ ೪ ರವರೆಗೆ ಭವ್ಯ ರಥೋತ್ಸವ, ದನಗಳ ಜಾತ್ರೆ ಹಾಗೂ ವಿಶೇಷ ಕಾರ್ಯಕ್ರಮಗಳು ಜರುಗಲಿವೆ. ಮಂಗಳವಾರ ಏಪ್ರಿಲ್ ದಿ ೨೧ ರಿಂದ ೨೯ ರವರೆಗೆ ಪ್ರತಿದಿನ ಸಾಯಂಕಾಲ ೭ ಗಂಟೆಗೆ ಪ್ರವಚನ ಇರುತ್ತದೆ. ಚಿಕ್‌ಕೊಟ್ನೆಕಲ್ ಗ್ರಾಮದ ಸಂಗೀತ ಬಳಗದವರು ಭಾಗವಹಿಸುವರು. ಶುಕ್ರವಾರ ದಿ ೨೪ ರಂದು ಮುಂ ೭ ಗಂಟೆಗೆ ಪಪೂ ಮನಿಪ್ರ ರಾಜಯೋಗಿ ಗುರುಬಸವ ಮಹಾಶಿವಯೋಗಿಗಳವರ ನೂತನ ಶಿಲಾಮೂರ್ತಿಯು ಕುಂಭಮೇಳದೊAದಿಗೆ ಪುರಪ್ರವೇಶ ಮಾಡುವದು.



ಬುಧವಾರ ದಿ ೨೯ ರಂದು ಗ್ರಾಮದ ಮಹಿಳೆಯರಿಂದ ಹೋಳಿಗೆ ಜಾತ್ರೆ ನಡೆಯಲಿದೆ. ಗುರುವಾರ ದಿ ೩೦ ರಂದು ಸಾಯಂಕಾಲ ೭ ಕ್ಕೆ ಶ್ರೀ “ಗುರುಬಸವ ಗೀತಾಮೃತ” ಗ್ರಂಥ ಬಿಡುಗಡೆ ನಿವೃತ್ತ ನ್ಯಾಯಾದೀಶರಾದ ಅರವಿಂದ ಪಾಶ್ಚಾಪುರೆ ಇವರಿಂದ ಹಾಗೂ ಅನೇಕ ಪೂಜ್ಯರಿಂದ ನಡೆಯಲಿದೆ. ಶುಕ್ರವಾರ ಮೇ ೧ ರಂದು ಸಾಯಂಕಾಲ ೭ ಕ್ಕೆ ಶ್ರೀ ಗುರುಬಸವ ಮಹಾಶಿವಯೋಗಿಗಳವರ ಕುರಿತಾದ ೮ ಭಕ್ತಿಗೀತೆಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಶನಿವಾರ ಮೇ ದಿ ೨ ರಂದು ಮುಂ ೮ ಕ್ಕೆ ಮುತೈದೆಯರ ಉಡಿ ತುಂಬುವ ತವರೂರಿನ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ೧೨ ಕ್ಕೆ ಮಹಾಪ್ರಸಾದ, ಸಂಜೆ ೭ ಕ್ಕೆ ಭಕ್ತಿ ಸಂಗೀತ ಕಾರ್ಯಕ್ರಮ, ರಾತ್ರಿ ಶ್ರೀ ಕೃಷ್ಣ ಪಾರಿಜಾತ ಬೈಲಾಟ ಜರುಗಲಿದೆ. ರವಿವಾರ ದಿ ೩ ರಂದು ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಗುರುಬಸವ ಶಿವಯೋಗಿಗಳ ನೂತನ ಶಿಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಜರುಗುವದು. ಮುಂ ೮ ಕ್ಕೆ ಭವ್ಯ ರಥೋತ್ಸವ ವಿವಿಧ ವಾದ್ಯಗಳ ಮೂಲಕ ಜರುಗಲಿದೆ. ಸಂಜೆ ೪ ಕ್ಕೆ ಜಂಗಿ ನಿಕಾಲಿ ಕುಸ್ತಿಗಳು ಜರುಗಲಿವೆ.
ಸೋಮವಾರ ದಿ ೪ ರಂದು ತರಬಂಡಿ ಸ್ಪರ್ಧೆಗಳ ನಡೆಯಲಿವೆ ಎಂದರು. ಈ ಎಲ್ಲ ಜಾತ್ರೆಯ ಕಾರ್ಯಕ್ರಮಗಳು ಯಶಸ್ವಿಯಾಗಿ ಮಾಡಲು ಹಿರಿಯರಾದ ಭೀಮಣ್ಣ ಶಿ ಗೆಜ್ಜಿ, ಮಹಾದೇವ ಸಿ ಕಾಯಪುರೆ, ಬಸಗೊಂಡ ಬಿ ಜಾಬಗೊಂಡ, ಶಂಕರ ನಿಂ ಜೀವಣ್ಣವರ, ರಾಯಣ್ಣ ಗು ಗೆಜ್ಜಿ, ಭೀಮು ಗು ಆಜೂರ, ಸದಾಶಿವ ಅ ಜಾರಿ, ಮಾದೇವ ನಿಂ ಜಟಗೊಂಡ ಸೇರಿದಂತೆ ಅನೇಕರು ಇದ್ದರು.

ವರದಿ :  ಆಕಾಶ ಎಮ್ ಐಗಳಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ