ಸಿಂಧನೂರು : ತಾಲೂಕಿನ ಗೊರೆಬಾಳ ಗ್ರಾಮದ ಸರಕಾರಿ ಹಿರಿಯ ಪ್ರಥಮಿಕ ಶಾಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷರಾದ ಮಂಜುನಾಥ್ ಹೆಡಗಿಬಾಳ ಅಧ್ಯಕ್ಷತೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ನಿಮಿತ್ಯಾ ಶಾಲಾ ವಿದ್ಯಾರ್ಥಿಗಳಿಗೆ ಪರಿಸರದ ಮಹತ್ವವನ್ನು ತಿಳಿಸಿ ವಿವಿಧ ಬಗೆಯ ಸಸಿಗಳನ್ನು ಮಕ್ಕಳಿಗೆ ದತ್ತು ನೀಡಲಾಯಿತು
ಆದುನಿಕ ಯುಗದಲ್ಲಿ ತಂತ್ರಜ್ಞಾನ ಬದಲಾದಂತೆ ಪರಿಸರ ನಾಶವಾಗುತ್ತದೆ ಇದರ ಪರಿಣಾಮವನ್ನು ಕೋವಿಡ್ ಸಮಯದ್ದಲ್ಲಿ ನೈಸರ್ಗಿಕ ಆಕ್ಸಿಜನ್ ಸಿಗದೇ ಹಲವಾರು ವ್ಯಕ್ತಿಗಳು ಮೃತರಾಗಿ ಅವರ ಕುಟುಂಬಗಳು ಸಂಕಷ್ಟ ಅನುಭವಿಸುತ್ತಿರುವದು ಕಾಣುತ್ತಿದ್ದೇವೆ, ನನ್ನನ್ನು ಬೆಳಸು ನಾನು ನಿನ್ನನು ರಕ್ಷಿಸುತ್ತೇನೆ ಎಂದು ಗಿಡಮರಗಳ ಮನದಾಳದ ಮತಗಿದ್ದು ಇದನ್ನು ಪ್ರತಿಯೊಬ್ಬರು ಅರ್ಥೈಸಿ ಕೊಳ್ಳಬೇಕೆಂದು ಮಂಜುನಾಥ್ ಹೆಡಗಿಬಾಳ ತಿಳಿಸಿದರು.
ಈ ಸಂದರ್ಭದಲ್ಲಿ: ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಪಂಪಾಪತಿ. ಸದಸ್ಯರಾದ ವಿರೇಶ್. ಬಸನಗೌಡ. ಶಿಕ್ಷಕರಾದ ಸರೋಜಿನಿ ಸರೋಜಿನಿ. ದೇವಿ. ಭೂಮಿಕಾ. ಶಕುಂತಲಾ. ಪಲ್ಲವಿ. ಸರಸ್ವತಿ. ಪಾರ್ವತಿ. ವಸೂದ ಹಾಗೂ ಬಿಸಿಯೂಟ ನೌಕರರು, ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು
ವರದಿ : ಬಸವರಾಜ ಬುಕ್ಕನಹಟ್ಟಿ.

