Ad imageAd image

ಸಿದ್ದರಾಮಯ್ಯ, ಗೃಹ ಸಚಿವರು ಏನು ಬಳೆ ತೊಟ್ಟುಕೊಂಡಿದ್ದಾರಾ? : ಬಿ.ವೈ.ವಿಜಯೇಂದ್ರ

Bharath Vaibhav
WhatsApp Group Join Now
Telegram Group Join Now

ಮೈಸೂರು: ಜಿಹಾದಿಗಳಿಗೆ, ಕೊಲೆ ಮಾಡುವ ಪುಂಡರಿಗೆ ಭಯವೇ ಇಲ್ಲದಾಗಿದೆ. ರಾಜ್ಯದಲ್ಲಿ ಮೇಲಿಂದ ಮೇಲೆ ಹಿಂದೂಗಳ ಹತ್ಯೆ ನಡೆಯುತ್ತಿದೆ.

ಆದಾಗ್ಯೂ ರಾಜ್ಯ ಸರ್ಕಾರ ಏನೂ ಕ್ರಮ ಕೈಗೊಳ್ಳದೇ ಸುಮ್ಮನಿದೆ. ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಏನು ಬಳೆ ತೊಟ್ಟುಕೊಂಡಿದ್ದಾರಾ?ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.

ಮೈಸೂರಿನ ವಾಟಾಳ್ ಗ್ರಾಮದಲ್ಲಿ ಮಾತನಾಡಿದ ಬಿ.ವೈ.ವಿಜಯೇಂದ್ರ, ರಾಜ್ಯ ಸರ್ಕಾರ ಮೊದಲು ತುಷ್ಠೀಕರಣ ನೀತಿಯನ್ನು ನಿಲ್ಲಿಸಬೇಕು. ರಾಜ್ಯದಲ್ಲಿ ಹಿಂದೂಗಳ ಹತ್ಯೆ ನಡೆಯುತ್ತಿದೆ. ಈ ಕೊಲೆಗಳ ಹೊಣೆ ಸರ್ಕಾರವೇ ಹೊರಬೇಕು ಎಂದು ಹೇಳಿದರು.

ಮೊದಲು ಸಿಎಂ ಗೆ ಒಲ್ಳೆಯ ಬುದ್ಧಿಕೊಡು ಅಂತಾ ಚಾಮುಂಡಿ ತಾಯಿಗೆ ಬೇಡಿಕೊಳ್ಳುತ್ತೇನೆ. ಹಿಂದೂಗಳ ಹತ್ಯೆ ನಿಲ್ಲಿಸುವ ಮನಸ್ಸುಕೊಡು ಎಂದು ಕೇಳಿಕೊಳ್ಳುತ್ತೇನೆ ಎಂದು ಹೆಳಿದರು.

WhatsApp Group Join Now
Telegram Group Join Now
Share This Article
error: Content is protected !!