Ad imageAd image

ಮಹರ್ಷಿ ವಾಲ್ಮೀಕಿ ಜಯಂತಿಗೆ ಅಧಿಕಾರಿಗಳು ಗೈರು, ಮಾನ್ವಿಯಲ್ಲಿ ವಾಲ್ಮೀಕಿ ಸಮಾಜದ ಮುಖಂಡರ ಆಕ್ರೋಶ

Bharath Vaibhav
ಮಹರ್ಷಿ ವಾಲ್ಮೀಕಿ ಜಯಂತಿಗೆ ಅಧಿಕಾರಿಗಳು ಗೈರು,  ಮಾನ್ವಿಯಲ್ಲಿ ವಾಲ್ಮೀಕಿ ಸಮಾಜದ ಮುಖಂಡರ ಆಕ್ರೋಶ
WhatsApp Group Join Now
Telegram Group Join Now

ಮಾನ್ವಿ:-ಮುಖಂಡರ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ತಹಸೀಲ್ದಾರ್ ರಾಜು ಪಿರಂಗಿ,ಶಿಷ್ಟಾಚಾರ ಪಾಲನೆ ಮಾಡಬೇಕೆಂದು ಮುಖಂಡರ ಗುಡುಗು,ಮಹರ್ಷಿ ವಾಲ್ಮೀಕಿ ಆಚರಣೆಗೆ ಅಧಿಕಾರಿಗಳು ಇರಬೇಕು.ಆದರೆ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ನಡೆದ ಮಹರ್ಷಿ ಜಯಂತಿಗೆ ಅಧಿಕಾರಿಗಳು ಗೈರಾಗಿದ್ದರಿಂದ ಮುಖಂಡರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

ವಾಲ್ಮೀಕಿ ಜಯಂತಿಗೆ ತಾಲೂಕ ಮಟ್ಟದ ಅಧಿಕಾರಿಗಳು ಇಲ್ಲವೆಂದ ಮೇಲೆ ಯಾಕಾದರು ಕಾರ್ಯಕ್ರಮ ಮಾಡುತ್ತೀರಾ, ಅಧಿಕಾರಿಗಳ ಕ್ರಮ ಜರುಗಿಸಬೇಕು ಎಂದಾಗ ತಹಸೀಲ್ದಾರ್ ರಾಜು ಪಿರಂಗಿಯವರು ಕಕ್ಕಾಬಿಕ್ಕಿಯಾದರು.

ಪೂರ್ವಭಾವಿ ಸಭೆಯಲ್ಲಿಯೂ ಸಹ ತಾಲೂಕ ಮಟ್ಟದ ಅಧಿಕಾರಿಗಳು ಇರಬೇಕು ಎಂದು ಸೂಚಿಸಿದ್ದರು ಸಹ ಅಧಿಕಾರಿಗಳು ಬಂದಿಲ್ಲ ಅಂದಮೇಲೆ ನಮ್ಮ ಧಿಕ್ಕಾರ ಎಂದು ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ತಹಸೀಲ್ದಾರ್ ರಾಜು ಪಿರಂಗಿ ಏನು ತಿಳಿಯದವರಾಗೆ ನಿಂತಿದ್ದರು.

ವರದಿ:- ಶಿವ ತೇಜ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!