ಮೊಳಕಾಲ್ಮುರು:- ಬೆಳ್ಳಂಬೆಳಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು ಇನ್ನೊರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ.
ಕೂಲಿ ಅರಸಿ ಬೆಂಗಳೂರಿಗೆ ದುಡಿಯಲೆಂದು ಹೊರಟ ಕೂಲಿ ಕಾರ್ಮಿಕ ಮಸಣ ಸೇರಿದ್ದಾನೆ, ಗುಲ್ಬರ್ಗ ಜಿಲ್ಲೆಯ ಆಳಂದ ತಾಲೂಕಿನ ಒಳವಂಡವಾಡಿ ಗ್ರಾಮದವರು ಕೂಲಿ ಮಾಡಲೆಂದು ಬೆಂಗಳೂರಿಗೆ ಹೊರಟಿದ್ದರು, ಮಾರ್ಗ ಮಧ್ಯೆ ಬಿಜಿಕೆರೆಯ ರಾಷ್ಟೀಯ ಹೆದ್ದಾರಿಯ ಹೊಸಕೆರೆ ಬ್ರಿಡ್ಜ್ ಬಳಿ ಕ್ರೂಜರ್ ವಾಹನದ ಟೈಯರ್ ಪಂಚರ್ ಆಗಿದೆ,ವಾಹನದಲ್ಲಿದ್ದ ಮಹಿಳೆಯರು ಸೇರಿದಂತೆ 9ಜನರ ಪೈಕಿ 7ಜನರು ವಾಹನದಿಂದ ಕೆಳಗಿಳಿದು ರಸ್ತೆಯ ಪಕ್ಕದಲ್ಲಿ ಕೂತಿದ್ದಾರೆ.ಟೈಯರ್ ಬದಲಿಸಲು ರಸ್ತೆ ಬದಿಯಲ್ಲಿ ಪಾರ್ಕಿಂಗ್ ಮಾಡಿ ಇಂಡಿಕೇಟರ್ ಹಾಕಿಕೊಂಡು ಡ್ರೈವರ್ ಜತೆಯಲ್ಲಿ ವಾಹನದಲ್ಲಿದ್ದ ಇನ್ನೊರ್ವ ವ್ಯಕ್ತಿ ಟೈಯರ್ ಬದಲಿಸು ಸಮಯದಲ್ಲಿ ವೇಗವಾಗಿ ಬಂದ ಲಾರಿಯೊಂದು ಇಬ್ಬರಿಗೆ ಡಿಕ್ಕಿ ಹೊಡೆದು ಹೋಗಿದೆ.ಘಟನೆಯಲ್ಲಿ ಕೂಲಿ ಕಾರ್ಮಿಕ ಚಂದ್ರಶೇಖರ್ ನ(45) ತಲೆಗೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಇನ್ನು ಇದೇ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಡ್ರೈವರ್ ಬಸವರಾಜ್ (28) ರವರನ್ನು ಆಂಬುಲೆನ್ಸ್ ಸಿಬ್ಬಂದಿಗಳು ಆಸ್ಪತ್ರೆಗೆ ಕರೆದೋಯ್ದಿದ್ದಾರೆ.ಘಟನಾ ಸ್ಥಳಕ್ಕೆ ಕ್ರೈಂ ಪಿಎಸ್ಐ ಈರೇಶ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಿ :-ಪಿಎಂ ಗಂಗಾಧರ