ಮುದಗಲ್ಲ :-ಸಮೀಪದ ಆಶಿಹಾಳ ತಾಂಡಾದ ಸ್ಥಳೀಯ ನಿವಾಸಿಗಳಾದ ತಿರುಪತಿ ಮತ್ತು ಸಂತೋಷ ಕುಮಾರ ಅವರು ಪಶು ವೈದ್ಯ ಹಾಗೂ ಸಿಬ್ಬಂದಿ ಗಬೀರ ಆರೋಪ ಮಾಡಿದ್ದಾರೆ.
ಡಾ!! ಮೌಲಾಸಾಬ ಪಶು ವೈದ್ಯರು ಹಾಗೂ ಸಿಬ್ಬಂದಿಗಳು ಆಶಿಹಾಳ ತಾಂಡಾ ಇವರು ಸರಿಯಾದ ಸಮಯಕ್ಕೆ ಆಸತ್ರೆಗೆ ಬಾರದೆ ಹಾಗೂ ದನ ಕರುಗಳಿಗೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದೆ ಸುಮ್ಮನೆ ಕುಡಿದು ಬಂದು ಆಸ್ಪತ್ರೆಯಲ್ಲಿ ಕಾಲ ಹರಣ ಮಾಡುತ್ತಿರುತ್ತಾರೆ ಎಂದು ಆರೋಪ ಮಾಡಿದ್ದಾರೆ.
ಸಾರ್ವಜನಿಕರಿಗೆ ಸರಿಯಾದ ಸಮಯದಲ್ಲಿ ಸ್ಪಂದನೆ ಮಾಡುವುದಿಲ್ಲ ಹಾಗೂ ಸಾರ್ವಜನಿಕರ ಪೋನ್ ಕರೆಗಳನ್ನು ಸ್ವಿಕಾರ ಮಾಡದೇ ಉಡಾಘೇ ಉತ್ತರ ನೀಡುವುದರ ಮೂಲಕ ನಿರ್ಲಕ್ಷ ಧೋರಣೆಯನ್ನು ತೋರಿಸುತ್ತಿದ್ದಾರೆ ಹಾಗೂ ನಮ್ಮ ಗ್ರಾಮದ ಆಸ್ಪತ್ರೆಯ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಬಂದು ಆಸ್ಪತ್ರೆಯನ್ನು ತೆರೆಯುವುದಿಲ್ಲ. ಅವರಿಗೆ ಅನುಕೂಲವಾಗುವ ಹಾಗೆ ಅಸ್ಪತ್ರೆಗೆ ಬರುತ್ತಾರೆ ಕೇಲವು ಸಲ ದಿನ ಪೂರ್ತಿ ಆಸ್ಪತ್ರೆ ಬಂದ ಮಾಡಿರುತ್ತಾರೆ ಇದರ ಬಗ್ಗೆ ಸಿಬ್ಬಂದಿಗಳಿಗೆ ಕೇಳಿದಾಗ ನಮಗೆ ವಿಚಾರಿಸೊಕೆ ನೀವು ಯಾರು ಎಂದು ನಮ್ಮ ಮೇಲೆ ದೌರ್ಜನ್ಯ ಮಾಡಲು ಬರುತ್ತಾರೆ ಕೇವಲ ಶ್ರೀಮಂತರ ಮನೆಗಳಿಗೆ ಹೊಗಿ ಅವರ ಪಶುಗಳಿಗೆ ಚಿಕಿತ್ಸೆ ನೀಡುತ್ತಾರೆ ಹೊರತು ಬಡವರು ತಮ್ಮ ಪಶುಗಳಿಗೆ ಆಸ್ಪತ್ರೆಗೆ ತಗೆದುಕೊಂಡು ಹೊದರೂ ಅದಕ್ಕೆ ಸರಿಯಾದ ಚಿಕಿತ್ಸೆ ನೀಡುವುದಿಲ್ಲ.
ಏನಾದರೂ ಕೇಳಿದರೆ ಸರಿಯಾದ ಔಷಧವಿಲ್ಲ ಎಂದು ಉಢಾಪೇ ಉತ್ತರ ನೀಡುತ್ತಿದ್ದಾರೆ. ದಿನಾಲು ಕುಡಿದ ಅಮಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದಕ್ಕೆ ಸಂಬಂದಿಸಿದ ವಿಡಿಯೋ ತುಣುಕುಗಳು ಸಹ ನಮ್ಮಲ್ಲಿವೆ. ಆದ್ದರಿಂದ ನಮ್ಮ ಗ್ರಾಮದ ಪಶು ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳನ್ನು ತತಕ್ಷಣದಿಂದಲೇ ವಜಾ ಗೋಳಿಸಿ ಅವರ ಜಾಗದಲ್ಲಿ ಬೇರೆ ಸಿಬ್ಬಂದಿಗಳನ್ನು ನೇಮಕ ಮಾಡಬೆಕೆಂದು ಪತ್ರಿಕೆ ಮುಖಾಂತರ ಮನವಿ ಮಾಡಿದರು.
ವರದಿ :- ಮಂಜುನಾಥ ಕುಂಬಾರು