Ad imageAd image

ಕರವೇ ನೂತನ ನಗರ ಘಟಕ ಮಹಿಳಾ ಪದಾಧಿಕಾರಿಗಳ ಆಯ್ಕೆ.!

Bharath Vaibhav
ಕರವೇ ನೂತನ ನಗರ ಘಟಕ ಮಹಿಳಾ ಪದಾಧಿಕಾರಿಗಳ ಆಯ್ಕೆ.!
WhatsApp Group Join Now
Telegram Group Join Now

ಸಿಂಧನೂರು : -27.10.2024 ರಂದು ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ವತಿಯಿಂದ ತಾಲೂಕ ಅಧ್ಯಕ್ಷರಾದ ಲಕ್ಷ್ಮಣ ಭೋವಿ ಅವರ ನೇತೃತ್ವದಲ್ಲಿ ಮಹಿಳಾ ನಗರ ಘಟಕ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು ಅಧ್ಯಕ್ಷರಾಗಿ – ಶಿವಮ್ಮ ಗಂಗಾನಗರ, ಉಪಾಧ್ಯಕ್ಷರಾಗಿ- ರೂಪ ಅಂಬಿಗೇರ್, ಅಮರಮ್ಮ ಹೇರೂರು, ಸರೋಜಮ್ಮ ಸರಸ್ವತಿ, ಕಾರ್ಯದರ್ಶಿಗಳಾಗಿ, ಮಾಂತಮ್ಮ ಫಾತಿಮಾ ಭಾಗ್ಯಮ್ಮ, ನೂತನ ಸದಸ್ಯರಾಗಿ ಆಯ್ಕೆ ಯಾದರೂ,
ಹಾಗೂ ಇದೇ ಸಂದರ್ಭದಲ್ಲಿ – ಅಜ್ಮೀರ್ ಸಾಬ್ ಅವರನ್ನು, ಅಲ್ಪಸಂಖ್ಯಾತರ ಘಟಕ ತಾಲೂಕು ಅಧ್ಯಕ್ಷರನ್ನಾಗಿ, ಸಲೀಂ ತುರ್ಕಟ್ಟಿ, ವಾರ್ಡ್ ನಂಬರ್ 20ರ ಅಧ್ಯಕ್ಷರಾಗಿ ಆಯ್ಕೆ ಮಾಡಿದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಲಕ್ಷ್ಮಣ್ ಭೋವಿ, ಸೋಮನಾಥ ಸುಲಂಗಿ, ಗುರುರಾಜ ಮುಕುಂದ, ಮಾತನಾಡಿ,ಕನ್ನಡ ನಾಡು ನುಡಿ ಸ್ವಾಭಿಮಾನದ ರಕ್ಷಣೆಯಲ್ಲಿ ಕರ್ನಾಟಕದ ರಕ್ಷಣಾ ವೇದಿಕೆ ನಾಡಿನಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತದೆ ಯುವಕರು- ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಂಡು ಕನ್ನಡಪರ ಸಂಘಟನೆ ಉತ್ತಮ ಕಾರ್ಯ ಚಟುವಟಿಕೆಯಲ್ಲಿ ಭಾಗವಹಿಸಿ ಕನ್ನಡ ನಾಡು ನುಡಿಗೆ ತಮ್ಮ ಸೇವೆ ಸಲ್ಲಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ – ತಾಲೂಕ ಘಟಕ ಉಪಾಧ್ಯಕ್ಷರಾದ – ರಾಜಸಾಬ್ ಲಕ್ಕಲಕಟ್ಟಿ , ನಗರ ಘಟಕದ ಅಧ್ಯಕ್ಷರಾದ – ರಫಿ ಕುನಟಗಿ, ಭಾಷಾ ಸಾಬ್, ಬಸವರಾಜ ಟೇಲರ್. ಇನ್ನಿತರ ಇದ್ದರು

ವರದಿ:-ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!