Ad imageAd image

ರಕ್ತಚಂದನ ಅಕ್ರಮ ಸಾಗಾಟ : 1889 ಕೆಜಿ ರಕ್ತಚಂದನ ವಶಕ್ಕೆ, ನಾಲ್ವರು ಅರೆಸ್ಟ್ 

Bharath Vaibhav
ರಕ್ತಚಂದನ ಅಕ್ರಮ ಸಾಗಾಟ : 1889 ಕೆಜಿ ರಕ್ತಚಂದನ ವಶಕ್ಕೆ, ನಾಲ್ವರು ಅರೆಸ್ಟ್ 
WhatsApp Group Join Now
Telegram Group Join Now

ಬೆಂಗಳೂರು: ರಕ್ತಚಂದನ ಅಕ್ರಮ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

ಆಂಧ್ರಪ್ರದೇಶದ ವರಪ್ರಸಾದ್ ರೆಡ್ಡಿ, ರಾಜಶೇಖರ್ ಬಂಧಿತ ಆರೋಪಿಗಳು. ಇನ್ನಿಬ್ಬರು ಆರೋಪಿಗಳ ಗುರುತು ಪತ್ತೆಯಾಗಬೇಕಿದೆ. ಬಂಧ್ತರಿಂದ 1.35 ಕೋಟಿ ರೂ ಮೌಲ್ಯದ 1889 ಕೆಜಿ ರಕ್ತಚಂದನ ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳಲ್ಲಿ ಓರ್ವ ಬಿಇ ಪದವೀಧರನಾಗಿದ್ದರೆ ಇನ್ನೋರ್ವ ಎಬಿಎ ಪದವೀಧರ. ಹುಳಿಮಾವಿನಲ್ಲಿ ಆರೋಪಿಗಳು ಕಾರಿನ ಹಿಂಬದಿ ಸೀಟು ತೆಗೆದು ಅದರ ಕೆಳಗೆ ರಕ್ತಚಂದನದ ತುಂಡುಗಳನ್ನು ಜೋಡಿಸಿಟ್ಟಿದ್ದರು. ಇದನ್ನು ಮಾರಾಟ ಮಾಡಲೆಂದು ತಮಿಳುನಾಡಿಗೆ ಹೋಗುತ್ತಿದ್ದಾಗ ಹುಳಿಮಾವು ಪೊಲೀಸರು ಕಾರು ಅಡ್ಡಗಟ್ಟಿ ಪರಿಶೀಲಿಸುದಾಗ ರಕ್ತಚಂದನ ಪತ್ತೆಯಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!