Ad imageAd image

ಹಿಂದೂ ಪದವನ್ನು ಅಸ್ತಿತ್ವಕ್ಕೆ ತಂದಿದ್ದೇ ಕಾಂಗ್ರೆಸ್ : ಸಂತೋಷ್ ಲಾಡ್ 

Bharath Vaibhav
ಹಿಂದೂ ಪದವನ್ನು ಅಸ್ತಿತ್ವಕ್ಕೆ ತಂದಿದ್ದೇ ಕಾಂಗ್ರೆಸ್ : ಸಂತೋಷ್ ಲಾಡ್ 
WhatsApp Group Join Now
Telegram Group Join Now

ಧಾರವಾಡ: ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ ತೊಗಲು ಬೊಂಬೆಯಾಟ ಉತ್ಸವ ಸಮಾರಂಭದಲ್ಲಿ ಮಾತನಾಡಿದ ಸಚಿವ ಸಂತೋಷ್ ಲಾಡ್, ಹಿಂದೂ ಎಂಬ ಪದವನ್ನು ತಂದಿದ್ದೇ ಕಾಂಗ್ರೆಸ್ ಪಕ್ಷ ಎಂದಿದ್ದಾರೆ.

ಹಿಂದೂ ಪದವನ್ನು ಅಸ್ತಿತ್ವಕ್ಕೆ ತಂದಿದ್ದೇ ಕಾಂಗ್ರೆಸ್ ನಮ್ಮ ಭಾರತ ದೇಶದಲ್ಲಿ ಹಿಂದೂ ಎಂಬ ಯಾವ ಪದವೇ ಇರಲಿಲ್ಲ. ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರು ಹಿಂದೂ ಕೋಡ್‌ ಬಿಲ್ ತರದೇ ಇದ್ದಿದ್ರೆ ನಾವು ಇವತ್ತು ಈ ರೀತಿ ಇರುತ್ತಿರಲಿಲ್ಲ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.

ಒಂದುವೇಳೆ ದೇಶದಲ್ಲಿ ಹಿಂದೂ ಕೋಡ್‌ ಬಿಲ್ ಜಾರಿಗೆ ತರದೇ ಇದ್ದಿದ್ರೆ, ಆಗ ಶೂದ್ರರನ್ನು ಕರೆಯಿರಿ, ಬ್ರಾಹ್ಮಣ, ವೈಷ್ಯರನ್ನು ಕರೆಯಿಸಿ ಎಂಬ ವ್ಯವಸ್ಥೆ ಈಗಲೂ ಇರುತ್ತಿತ್ತು ಎಂದು ಹೇಳಿದ್ದಾರೆ.

ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ವಿಪರಿಯಾಸ ಅಂದ್ರೆ ನಿಜವಾದ ಇತಿಹಾಸವನ್ನು ನಮ್ಮ ಜನ ಓದುವುದಿಲ್ಲ. ಕೇವಲ ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿ ಹೇರುವುದೇ ರಾಜಕಾರಣವಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಬೇಸರ ಹೊರಹಾಕಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!