Ad imageAd image

ಬೆಳೆ ನಷ್ಟವಾಗಿ ರೈತರು ಕಂಗಾಲಾಗಿದ್ದಾರೆ ತಕ್ಷಣವೇ ಪರಿಹಾರ ನೀಡಬೇಕು:ಮಹದೇವ್ ಕೊಡ್ಲಾ.

Bharath Vaibhav
ಬೆಳೆ ನಷ್ಟವಾಗಿ ರೈತರು ಕಂಗಾಲಾಗಿದ್ದಾರೆ ತಕ್ಷಣವೇ ಪರಿಹಾರ ನೀಡಬೇಕು:ಮಹದೇವ್ ಕೊಡ್ಲಾ.
WhatsApp Group Join Now
Telegram Group Join Now

ಸೇಡಂ:- ತಾಲೂಕಿನ ಮತಕ್ಷೇತ್ರದ ಕಡೆ ಬೆಳೆದು ಫಸಲಿಗೆ ಫಸಲಿಗೆ ಬಂದ ತೊಗರಿ ಬೇಳೆ ಒಣಗಿ ನಷ್ಟವಾಗಿದೆ ಇದರಿಂದ ಬೆಳೆಯನ್ನೇ ನಂಬಿಕೊಂಡಿದ್ದ ರೈತರಿಗೆ ದಿಕ್ಕು ಕಾಣದಂತಾಗಿದ್ದು ಸರ್ಕಾರ ಕೂಡಲೇ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಮಹಾದೇವ ನೇರೆಟ್ಟಿ ಕೋಡ್ಲಾ ಅವರು ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಅತಿವೃಷ್ಟಿ ಅನಾವೃಷ್ಟಿಗಳಿಂದ ಅಳಿದುಳಿದು ಫಸಲಿಗೆ ಬಂದ ತೊಗರಿ ಬೆಳೆ ನೇಟೆರೋಗವೂ ಅಥವಾ ತೇವಾಂಶ ಕೊರತೆಯೂ ಹೀಗೆ ಇನ್ಯಾವುದೋ ಕಾರಣಕ್ಕೆ ಕೈಗೆ ಬಂದ ಬೆಳೆ ಶೇ 90ರಷ್ಟು ಬೆಳೆ ನಷ್ಟವಾಗಿ ರೈತರು ಕಂಗಾಲಾಗಿದ್ದಾರೆ.

ಇದರ ಕುರಿತು ತಕ್ಷಣವೇ ಸರ್ವೆ ನಡೆಸಿ ಕೂಡಲೇ ಸಂತ್ರಸ್ತ ರೈತರಿಗೆ ಪರಿಹಾರ ಒದಗಿಸಬೇಕು ರೈತರು ಬೆಳೆದ ತೊಗರಿ ಬೆಳೆಗಳಿಗೆ ನೆಟೆ ರೋಗದಿಂದ ಬೆಳೆ ಸಂಪೂರ್ಣವಾಗಿ ನಾಶವಾಗಿದ್ದು ರೈತರು ಕಂಗಲಾಗಿದ್ದಾರೆ ಕೊಡಲೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ವರದಿ:- ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
Share This Article
error: Content is protected !!