Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರೌಡಿಶೀಟರ್‌ಗೆ 6 ತಿಂಗಳ ಗಡಿಪಾರು: ಬೆಳಗಾವಿ ಜಿಲ್ಲೆಯಿಂದ ಹೊರಕ್ಕೆ

Advertisement

ಬೆಳಗಾವಿ: ಜಿಲ್ಲೆ ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯ ನುಗ್ಗಾನಟ್ಟಿ ಗ್ರಾಮದ ರೌಡಿಶೀಟರ್ ನೀಲಕಂಠ ಮುದಕಪ್ಪ ಮನವಾಡಕರ (26 ವರ್ಷ) ಎಂಬಾತನನ್ನು 6 ತಿಂಗಳ ಕಾಲ ಬೆಳಗಾವಿ ಜಿಲ್ಲೆಯಿಂದ ಗಡಿಪಾರು ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

1. ಮಾಡಮಗೇರಿ ಗ್ರಾಮದ ಒಬ್ಬ ಮುಗ್ಧ ದಲಿತ ಮಹಿಳೆಗೆ ಹೆದರಿಸಿ ಜಮೀನು ಕಬಳಿಸಲು ಯತ್ನ.
2. ನುಗ್ಗಾನಟ್ಟಿ ಗ್ರಾಮದ ಅಮಾಯಕ ಯುವಕ ರಾಜು ಮುದ್ದನ್ನವರನನ್ನು ರೌಡಿ ಸಹಚರರೊಂದಿಗೆ ಸೇರಿ ಕೊಲೆ ಮಾಡಿದ ಪ್ರಕರಣ.
3. ಯರಝರ್ವಿ ಗ್ರಾಮದ ನಡು ರಸ್ತೆಯಲ್ಲಿ ಕುಟರನಟ್ಟಿ ಗ್ರಾಮದ ವ್ಯಕ್ತಿಯ ಮೇಲೆ ಹಲ್ಲೆ.

ಈತನ ದೌರ್ಜನ್ಯದಿಂದ ನುಗ್ಗಾನಟ್ಟಿ, ಯರಗಟ್ಟಿ, ಬೂದಿಗೊಪ್ಪ, ಯರಝರ್ವಿ, ಕುಟರನಟ್ಟಿ, ಮಾಡಮಗೇರಿ, ಗೋಕಾಕ, ಖನಗಾಂವ, ಬೆಣಚಿನಮರಡಿ ಮತ್ತು ಗುಧಟ್ಟಿ ಗ್ರಾಮಸ್ಥರು ನೆಮ್ಮದಿಯಿಂದ ಜೀವನ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈತನ ಉಪಟಳ, ಸಾಮಾಜಿಕ ಜಾಲತಾಣದಲ್ಲಿ ಫೋಟೋ-ವಿಡಿಯೋ ಹರಿಬಿಟ್ಟು ಸಾರ್ವಜನಿಕರಲ್ಲಿ ಭಯ ಹುಟ್ಟಿಸುತ್ತಿದ್ದ.

ಸಾಕ್ಷಿದಾರರಿಗೂ ಬೆದರಿಕೆ ಹಾಕುತ್ತಿದ್ದ ಕಾರಣ ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರ ವರದಿ ಆಧರಿಸಿ, ಜಿಲ್ಲಾಧಿಕಾರಿಗಳು ಈತನನ್ನು 6 ತಿಂಗಳ ಕಾಲ ಜಿಲ್ಲೆಯಿಂದ ಗಡಿಪಾರು ಮಾಡಿದ್ದಾರೆ. ಮುರಗೋಡ ಪೊಲೀಸರು ಆರೋಪಿಯನ್ನು ಧಾರವಾಡ ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ಜಾರಿಗೊಳಿಸಿದ್ದಾರೆ.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ. ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ: ತಮಿಳುನಾಡಿನಲ್ಲಿ ಡಿಎಂಕೆ ಪುನರಾಯ್ಕೆ, ಆಸ್ಸಾಮ್‌ನಲ್ಲಿ ಬಿಜೆಪಿ ಹ್ಯಾಟ್ರಿಕ್ಸಿಡಿಲಿನ ಆಘಾತಕ್ಕೆ 66 ಕುರಿಗಳ ಸಾವು: ಬುದುರು ಗ್ರಾಮದಲ್ಲಿ ದುರಂತ ಶಾಸಕರ ಭೇಟಿರೌಡಿಶೀಟರ್‌ಗೆ 6 ತಿಂಗಳ ಗಡಿಪಾರು: ಬೆಳಗಾವಿ ಜಿಲ್ಲೆಯಿಂದ ಹೊರಕ್ಕೆಬಾಂಗ್ಲಾ- ಕಿವೀಸ್ ಪಂದ್ಯ ಮಳೆಯಿಂದ ರದ್ದು ಕರವೇ ರಾಜ್ಯಾಧ್ಯಕ್ಷರಾದ ಡಾ.ಚಲಪತಿ ಗೌಡರು ಭೂಮಾಪಕರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಅಗ್ನಿಶಾಮಕದಳದಲ್ಲಿ ಖಾಲಿರುವ 1828 ಹುದ್ದೆಗಳಿಗೆ ಅರ್ಜಿ ಆಹ್ವಾನ ತೀವ್ರ ತಾಪಮಾನಕ್ಕೆ  ವಿಜಯಪುರದಲ್ಲಿ 15 ವರ್ಷದ ಬಾಲಕ ಸಾವು ST. ಯುವತಿಯೊಂದಿಗೆ ಪ್ರೇಮಾಂಕುರ : ಕುರುಬರಿಂದಲೇ ಕುರುಬ ಸಮಾಜದ ಕುಟುಂಬಕ್ಕೆ ಬಹಿಷ್ಕಾರಕುಡಿಯುವ ನೀರಿನ ಪೂರೈಕೆಗೆ ತುರ್ತಾಗಿ ಸ್ಪಂದಿಸಿ: ರಾಹುಲ್ ಶಿಂಧೆ ಪೊಲೀಸರ ಕಿರುಕುಳದಿಂದ ವಿದ್ಯಾರ್ಥಿ ಆತ್ಮಹತ್ಯೆ ಕೇಸ್ : ಮೂವರು ದುಷ್ಟ ಪೊಲೀಸರು ಅಮಾನತು