ರಾಯಚೂರು :ತಾಲೂಕ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು. ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಿ, ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಜನಪರ ಆಡಳಿತ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಜನರ ಅಭಿವೃದ್ಧಿ ಮತ್ತು ಕಲ್ಯಾಣವೇ ನಮ್ಮ ಪ್ರಮುಖ ಗುರಿ. ಅಭಿವೃದ್ಧಿಯ ಪಥದಲ್ಲಿ ಎಲ್ಲ ಇಲಾಖೆಗಳ ಸಮನ್ವಯದೊಂದಿಗೆ ಇನ್ನಷ್ಟು ಪರಿಣಾಮಕಾರಿ ಕಾರ್ಯಗಳನ್ನು ಕೈಗೊಳ್ಳಲು ಸಂಕಲ್ಪಿಸಲಾಗಿದೆ. ಎಂದು ತಿಳಿಸಿದರು.
ರಾಯಚೂರು ಕೃಷಿ ಅಧಿಕಾರಿಗಳಿಗೆ ದಾಸ್ತನಾಗಿರುವ ರಸಗೊಬ್ಬರ ಮತ್ತು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತನಾಗಿರುವ ಬೀಜಗಳ ಬಗ್ಗೆ ವಿಚಾರಿಸಲಾಯಿತು ಮತ್ತು ಗ್ರಾಮಾಂತರ ಭಾಗಗಳಲ್ಲಿ ಮತ್ತು ಗಡಿ ಭಾಗದಲ್ಲಿ ನಕಲಿ ಬಿತ್ತನೆ ಬೀಜ ಮತ್ತು ನಕಲಿ ರಸಗೊಬ್ಬರ ನಕಲಿ ಜೈವಿಕ ಹೆಸರಿನಲ್ಲಿ ನಕಲಿ ಸುಡುಬಯೋಗಳು ಮಾರಾಟ ಮಾಡುವುದರ ಬಗ್ಗೆ ಎಚ್ಚರಿಕೆ ವಹಿಸಬೇಕೂ ಆಂಧ್ರ ತೆಲಂಗಾಣ ಗಡಿ ಭಾಗಗಳಿಂದ ಬರುವ ನಕಲಿ ಕ್ರಿಮಿನಾಶಕಗಳನ್ನು ಮತ್ತು ನಕಲಿ ಬೀಜಗಳನ್ನು ನಕಲಿ ರಸಗೊಬ್ಬರವನ್ನು ಬರುವ ಬಗ್ಗೆ ಸೂಕ್ತ ನಿಗವಹಿಸಬೇಕು ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು .
ಈಗಾಗಲೇ ರೈತರಿಗೆ ರಸಗೊಬ್ಬರ ಜೋಡಣೆ ಮಾಡುವುದನ್ನು ತಡೆಗಟ್ಟಬೇಕು ಅಂತಹ ಜೋಡಣೆ ಮಾಡಿ ನೀಡುವಂತಹ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ರೈತರಿಗೆ ಮೋಸವಗದಂತೆ ನೋಡಿಕೊಳ್ಳಬೇಕೆಂದು ಸಹಾಯಕ ಕೃಷಿ ನಿರ್ದೇಶಕಿ ದೀಪ ಕುಲಕರ್ಣಿರವರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರು ಹಂಪಣ್ಣ ಸಜ್ಜನ್. ಡಿ ವೈ ಎಸ್ ಪಿ ಶಾಂತವೀರ್ . ತಾಹಾಶಿಲ್ದಾರ್ ಸುರೇಶ್ ವರ್ಮ. ಜಯಂತ್ ರಾವ್ ಪತಂಗಿ .ಮಲ್ಲಿಕಾರ್ಜುನಗೌಡ ತಲ್ಮಾರಿ. ಪವನ್ ಪಾಟೀಲ್.ಬಷೀರ್ ಅಹ್ಮದ್..ಎಲ್ಲ ಕೆಡಿಪಿ ಸದಸ್ಯರು .ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಗಾರಲದಿನ್ನಿ ವೀರನಗೌಡ


