ಹುಬ್ಬಳ್ಳಿ: ಹಳೇಹುಬ್ಬಳ್ಳಿಯ ಪ್ರಮುಖ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ ಒತ್ತುವರಿ ತೆರವುಗೊಳಿಸುವಂತೆ ಒತ್ತಾಯಿಸಿ ಸಮತಾ ಸೇನಾ ನೇತೃತ್ವದಲ್ಲಿ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದರು.
ಒತ್ತುವರಿ ಪ್ರಕರಣಕ್ಕೆ ಸಂಬAಧಿಸಿದAತೆ ಚರ್ಚಿಸಲು ಚರ್ಚೆಗೆ ಆಗಮಿಸುವಂತೆ ಪಾಲಿಕೆ ಆಯುಕ್ತರು ನಮ್ಮನ್ನು ಆಹ್ವಾನಿಸಿದರು. ಆದರೆ ಇಲ್ಲಿ ಬಂದಾಗ ಆಯುಕ್ತರೇ ಇರಲಿಲ್ಲ, ಇದರಿಂದ ರೋಸಿ ಹೋದ ಸಂಘಟಕರು ಆಯುಕ್ತರ ಕಚೇರಿಯಲ್ಲೇ ದಿಢೀರ್ ಧರಣಿ ಆರಂಭಿಸಿದರು.
ಈ ವೇಳೆ ಆಯುಕ್ತರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ೭ ದಿನಗಳಗಾಗಿ ಒತ್ತುವರಿ ಆದ ೧ ಎಕರೆ ೧೧ ಗುಂಟೆ ಜಾಗೆಯನ್ನು ತೆರವುಗೊಳಿಸಬೇಕು. ಇಲ್ಲದಿದ್ದರೇ ಆಯುಕ್ತರ ಕಛೇರಿಯಲ್ಲಿ ಧರಣಿ ಪುನರ್ ಆರಂಭಿಸುತ್ತೇವೆ ಎಂದು ಸಮತಾ ಸೇನಾ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ ಎಚ್ಚರಿಕೆ ನೀಡಿದರು.
೨೦೧೦ ರಿಂದ ನಿರಂತರವಾಗಿ ಸಮನಾ ಸೇನೆ, ಶ್ರೀ ಭುವನೇಶ್ವರಿ ಸೇವಾ ಸಂಘ ಹಾಗೂ ವಿವಿಧ ದಲಿತ ಸೇವಾ ಸಂಘಗಳ ಮಹಾಮಂಡಳದ ವತಿಯಿಂದ ಇದೇ ವಿಷಯವಾಗಿ ಅನೇಕ ಹೋರಾಟಗಳನ್ನು ನಡೆಸಲಾಗಿದೆ. ಆದರೂ ಮಹಾಪಾಲಿಕೆಯೂ ಒತ್ತುವರಿ ತೆರವುಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಅಲ್ಲದೇ ಒತ್ತುವರಿ ಕುರಿತಾಗಿ ಕೋರ್ಟ್ನಲ್ಲಿ ವಿಚಾರಣೆ ನಡೆದು ಪ್ರಕರಣ ಅಂತ್ಯಕAಡಿದ್ದು, ಪ್ರಕರಣ ಸೇನಾ ಪರವಾಗಿ ಬಂದಿದೆ. ಕೋರ್ಟ್ ನಿರ್ದೇಶನ ಇದ್ದಾಗಲೂ ಸಹ ಪಾಲಿಕೆ ಆಯುಕ್ತರು ಕಾನೂನು ಕ್ರಮ ಕೈಗೊಳ್ಳಲು ಹಿಂದೆಟ್ಟು ಹಾಕುತ್ತಿದ್ದಾರೆ ಎಂದು ಉಳ್ಳಿಕಾಶಿ ಆರೋಪಿಸಿದರು.
ಒತ್ತುವರಿ ಹಿಂದೆ ಪ್ರಭಾವಿ ಕಾಣದ ಕೈಗಳಿದ್ದು, ಅವರು ಹೇಳಿದಂತೆ ಪಾಲಿಕೆ ಆಯುಕ್ತರು ನಡೆಯುತ್ತಿದ್ದಾರೆ. ಒಂದೆಡೆ ಫುಟ್ಪಾತ್ ತೆರವುಗೊಳಿಸಿ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಹಿಂಸೆ ನೀಡುತ್ತಿರುವ ಪಾಲಿಕೆ ಕ್ರೀಡಾಂಗಣ ಒತ್ತುವರಿ ತೆರವಿಗೆ ಯಾಕೆ? ಮುಂದಾಗಿತ್ತಿಲ್ಲ. ಈ ದ್ವಂದ್ವ ನಿಲುವು ಏಕೆ? ಎಂದು ಖಾರವಾಗಿ ಪ್ರಶ್ನಿಸಿದರು.
ಪತ್ರಿಭಟನೆಯಲ್ಲಿ ರೇವಣಸಿದ್ದಪ್ಪ ಹೊಸಮನಿ, ಮನಿಲ್ಲಾ ಬೆಣಗಿ, ಇಮ್ತಿಯಾಜ್ ಬಿಜಾಪುರ, ಮಂಜುನಾಥ ಉಳ್ಳಿಕಾಶಿ, ಮಹೇಶ ತೇರದಾಳ, ಪ್ರಶಾಂತ ವಾಲಿ, ಹನುಮಂತ ಮೂಲಿಮನಿ, ಇಲಿಯಾಸ ಬ್ಯಾಳಿ, ಸೊಹೆಲ್ ಯಾದಗೇರಿ, ಹುಸೇನ ಮದರಂಗಿ, ಅಶೋಕ ಕಾಶೇನವರ ಸೇರಿದಂತೆ ಅನೇಕರಿದ್ದರು.
ವರದಿ:ಸುಧೀರ್ ಕುಲಕರ್ಣಿ

