Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಿತ್ತನೆ ಕೂರಿಗೆಗೆ ಹೆಗಲು ಕೊಟ್ಟ ವೃದ್ಧ ದಂಪತಿ 

Advertisement

ಬೀದರ್ : ಬೀದರ್ ಜಿಲ್ಲೆಯ (Bidar) ಹುಮನಾಬಾದ್ ತಾಲೂಕಿನ ಹಳ್ಳಿಖೇಡ (ಬಿ) ಗ್ರಾಮದಲ್ಲಿ ತೀವ್ರ ಆರ್ಥಿಕ ಸಂಕಷ್ಟದ ನಡುವೆಯೂ ವೃದ್ಧ ದಂಪತಿಯೊಬ್ಬರು (Couple )ತಾವೇ ಹೆಗಲು ಕೊಟ್ಟು ಬಿತ್ತನೆ ಕೂರಿಗೆಯನ್ನು ಎಳೆದ ಮನಕಲಕುವ ಘಟನೆ ಬೆಳಕಿಗೆ ಬಂದಿದೆ.

ಗ್ರಾಮದ ತಿಪ್ಪಣ್ಣ ಮತ್ತು ಗಂಗಮ್ಮ ದಂಪತಿ ಅಲ್ಪಸ್ವಲ್ಪ ಜಮೀನು ಹೊಂದಿದ್ದು, ಅದನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚೆಗೆ ಸುರಿದ ಮಳೆಗೆ ಹೊಲದಲ್ಲಿ ಬಿತ್ತನೆ ಮಾಡಲು ಮುಂದಾಗಿದ್ದ ಈ ದಂಪತಿಗೆ ಆರ್ಥಿಕ ಮುಗ್ಗಟ್ಟಿನಿಂದಾಗಿ ಎತ್ತುಗಳನ್ನು ಬಾಡಿಗೆಗೆ ತರಲು ಅಥವಾ ಟ್ರ್ಯಾಕ್ಟರ್ ಬಳಸಲು ಹಣವಿರಲಿಲ್ಲ. ಕೃಷಿ ಕಾರ್ಯ ಕೈಬಿಡಲಾಗದೆ, ಕೊನೆಗೆ ವೃದ್ಧ ದಂಪತಿ ತಾವೇ ಕೂರಿಗೆಗೆ ಹೆಗಲು ಕೊಟ್ಟು ಹೊಲದಲ್ಲಿ ಬಿತ್ತನೆ ಕಾರ್ಯ ನಡೆಸಿದ್ದಾರೆ.

ಮೊದಲು ಈ ಜಮೀನಿನಲ್ಲಿ ಉದ್ದು ಬಿತ್ತನೆ ಮಾಡಿದ್ದರೂ ಮಳೆ ಕೊರತೆಯಿಂದಾಗಿ ಬೆಳೆ ಕೈಕೊಟ್ಟಿತ್ತು.

 ಇದರಿಂದ ದುಪ್ಪಟ್ಟು ನಷ್ಟದ ಬಿಸಿ ಎದುರಿಸುತ್ತಿರುವ ದಂಪತಿ, ಇದೀಗ ಅದೇ ಜಮೀನಿನಲ್ಲಿ ಮರುಬಿತ್ತನೆ ಮಾಡಲು ಮುಂದಾಗಿ ತೊಗರಿ ಬೀಜವನ್ನು ತಾವೇ ಕೂರಿಗೆ ಎಳೆಯುವ ಮೂಲಕ ಬಿತ್ತಿದ್ದಾರೆ.

ವೃದ್ಧಾಪ್ಯದಲ್ಲೂ ಬೆವರು ಹರಿಸಿ ಕಷ್ಟಪಡುತ್ತಿರುವ ತಮಗೆ ಸ್ವಂತ ಮನೆಯಾಗಲಿ, ಯಾವುದೇ ಸರ್ಕಾರಿ ಸೌಲಭ್ಯಗಳಾಗಲಿ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡಿರುವ ದಂಪತಿ, ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ತಮ್ಮ ನೆರವಿಗೆ ಬರಬೇಕೆಂದು ಮನವಿ ಮಾಡಿದ್ದಾರೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಇನ್ನಿಲ್ಲ ಬಿತ್ತನೆ ಕೂರಿಗೆಗೆ ಹೆಗಲು ಕೊಟ್ಟ ವೃದ್ಧ ದಂಪತಿ ಪ್ರಿಯಕರನ ಸಹವಾಸ ಬಿಡದ ಪತ್ನಿ : ತುಂಗಾ ನಾಲೆಗೆ ಹಾರಿ ಗಂಡ ಆತ್ಮಹತ್ಯೆ ಮಾಹೆ-ಎಸ್‌ಎಂಐ 'ವಿನ್ಯಾಸ-ಫಿನ್‌ಟೆಕ್' ಸಮ್ಮೇಳನ: ಎನ್‌ಪಿಎಸ್ ಪ್ರಕ್ರಿಯೆ ಸರಳೀಕರಣಕ್ಕೆ ಎಐ ಬಳಕೆ : ಪಿಎಫ್‌ಆರ್‌ಡಿಎ ಅಧ್ಯಕ್ಷಕೊಲೆ ಪ್ರಕರಣದ ಸಾಕ್ಷಿಯನ್ನ ಹಿಡಕಲ್ ಡ್ಯಾಂ ಬಳಿ ಭೀಕರ ಹತ್ಯೆಗೈದ ದುಷ್ಕರ್ಮಿಗಳು ನಾಳೆ ಸಚಿವ ಸಂಪುಟದ ತುರ್ತು ಸಭೆಚಹಾ ಕುಡಿಯಲು 20 ರೂ. ನೀಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವೃದ್ಧನ ತಲೆಯನ್ನೇ ಕತ್ತರಿಸಿ ಭೀಕರ ಹತ್ಯೆಮಹಿಳೆ ಹತ್ಯೆಗೈದು ಆಕೆಯ ಶವದ ಮೇಲೆ ಅತ್ಯಾಚಾರ : ದುಷ್ಟ ಅರೆಸ್ಟ್ ಕಾರು ಅಪಘಾತದಲ್ಲಿ ಕೈ ಕಟ್ : ಬಾಗಲಕೋಟೆಯಲ್ಲಿ ಕತ್ತರಿಸಿದ ಕೈಯೊಂದಿಗೆ ಬಂದ ಗಾಯಾಳುಸೋನಮ್ ವಾಂಗ್ಚುಕ್ ನಿರಶನ ಬೆಂಬಲಿಸಿ ಪ್ರಗತಿಪರ ಸಂಘಟನೆಗಳು ಧರಣಿ ಸತ್ಯಾಗ್ರಹ!