Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮೂಲ ಸೌಕರ್ಯ ವಂಚಿತ ಹಂಚಿನಾಳ ಕ್ಯಾಂಪು (ಯು) ಗ್ರಾಮ

Advertisement

ಸಿಂಧನೂರು : ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಕೋಳಬಾಳ ಪಂಚಾಯಿತಿ ವ್ಯಾಪ್ತಿಗೆ ಬರುವ ಹಂಚಿನಾಳ  ಕ್ಯಾಂಪ್ (ಯು) ಗ್ರಾಮದಲ್ಲಿ ಸುಮಾರು 500 ರಿಂದ 600 ಜನಸಂಖ್ಯೆ ಹೊಂದಿರುವ ಗ್ರಾಮವು ಹಲವು ಸಮಸ್ಯೆಗಳ ಆಗರವಾಗಿದೆ.
 

ಗ್ರಾಮಕ್ಕೆ ಬಸ್ ಸೌಕರ್ಯವಿಲ್ಲದೆ ಸರಿಯಾದ ರಸ್ತೆ ಇಲ್ಲದಿರುವುದರಿಂದ ಯಾವ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಭೇಟಿ ನೀಡುತ್ತಿಲ್ಲ  ಗ್ರಾಮ ಪಂಚಾಯಿತಿ ಅಧಿಕಾರಿ ಕೂಡ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ ಎಂದು ಕೋಳಬಾಳ ಮಾಜಿ ಗ್ರಾಮ ಪಂಚಾಯತಿ ಸದಸ್ಯ ವೀರಭದ್ರಗೌಡ ಮತ್ತು ಗ್ರಾಮಸ್ಥರು ಆರೋಪಿಸಿದ್ದಾರೆ.
news_1778481258_0_631.webp

 


 

ನಮ್ಮ ಗ್ರಾಮಕ್ಕೆ ಬಸ್ ಓಡಾಟಕ್ಕಾಗಿ ಹಲವು ಬಾರಿ ಡಿಪೋ ಮ್ಯಾನೇಜರ್ ಗೆ ಮನವಿ ಸಲ್ಲಿಸಿದ್ದೇವೆ ಆದರೂ ಸಹ ಬಸ್ ಬರ್ತಾ ಇಲ್ಲ ಸ್ಕೂಲ್ ಮಕ್ಕಳು ಶಾಲೆಗೆ ಹೋಗುವುದಕ್ಕೆ ಬಾಣಂತಿಯರು ಮತ್ತು ವೃದ್ಧರು ಆಸ್ಪತ್ರೆಗೆ ಹೋಗಲು ಪರದಾಡ ಬೇಕಾಗಿದೆ ಹಾಗೂ ಸಮರ್ಪಕವಾಗಿ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಗಳ ಮೇಲೆ ಕೊಳಚೆ ನೀರು ಹರಿಯುತ್ತಿದೆ ಈ ಗ್ರಾಮಕ್ಕೆ ಮುಖ್ಯವಾಗಿ ರಸ್ತೆ, ಬಸ್, ಕುಡಿಯುವ ನೀರು ಮತ್ತು ಚರಂಡಿ ವ್ಯವಸ್ಥೆಗಳು ಪರಿಹರಿಸಲು ಸ್ಥಳೀಯ ಶಾಸಕ ಬಸನಗೌಡ ತುರುವಿಹಾಳ ಮತ್ತು ತಾಲೂಕ  ಆಡಳಿತ ತುರ್ತಾಗಿ ಗಮನ ಹರಿಸಬೇಕಾಗಿದೆ ಎಂದು ಸ್ಥಳೀಯ ಮುಖಂಡ ಜಿ. ಸುಬ್ಬರಾವ್ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಆದನಗೌಡ ಪೊಲೀಸ್ ಪಾಟೀಲ್. ರಮೇಶ್ ಮೇಸ್ತ್ರಿ. ಡಿಎಸ್ಎಸ್ ಮುಖಂಡ ನಿರುಪಾದೆಪ್ಪ ಎಲೆಕೊಡ್ಲಿಗಿ ನರಸಪ್ಪ. ಟಿ. ಶರಣಪ್ಪ. ಮುದಿಯಪ್ಪ ಯಮನಪ್ಪ ನಾಗರಾಜ ಬಸವರಾಜ. ದುರ್ಗಪ್ಪ ಸುರೇಶ್ ಕಲ್ಮಂಗಿ.ಶಿವಪ್ಪ ನಂದವಾಡಗಿ. ಇನ್ನು ಅನೇಕರು ಇದ್ದರು


ವರದಿ:ಬಸವರಾಜ ಬುಕ್ಕನಹಟ್ಟಿ

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೈಲಲ್ಲಿ ಜಗಳ ಬಿಡಿಸಲು ಹೋದ ಜೈಲರ್ ಮೇಲೆ ಕೈದಿಗಳಿಂದ ಭೀಕರವಾಗಿ ಹಲ್ಲೆಬೆಳಗಾವಿಯಲ್ಲಿ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡಕರಗ ಮಹೋತ್ಸಕ್ಕೆ 50 ಸಾವಿರ ಭಕ್ತರಿಗೆ ಬಿಜೆಪಿ ಕಾರ್ಯದರ್ಶಿ ಸಿ.ಮುನಿರಾಜುರವರಿಂದ ಪ್ರಸಾದ ವಿತರಣೆ ಸವಣೂರಿನಲ್ಲಿ ಶ್ರೀ ದಿಂಗಾಲೇಶ್ವರ ಶ್ರೀಗಳ ಪುರ ಪ್ರವೇಶ:   ಮೇ 11, 12 ರಂದು ಜಾತ್ರಾ ಮಹೋತ್ಸವ74 ನೆ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಅನುಷ್ಠಾನ ಅಧ್ಯಕ್ಷರಾಗಿ ಆನಂದ್ ಮುಶಣ್ಣವರ್ ಆಯ್ಕೆ.ಮೂಲ ಸೌಕರ್ಯ ವಂಚಿತ ಹಂಚಿನಾಳ ಕ್ಯಾಂಪು (ಯು) ಗ್ರಾಮದೊಡ್ಡಹಟ್ಟಿಯಲ್ಲಿ ಬ್ಯಾಟಿಂಗ್ ಮಾಡಿ ಕ್ರಿಕೆಟ್ ಟೂರ್ನಿ ಉದ್ಘಾಟನೆ ತಾಯಂದಿರ ದಿನವೇ ಹೆತ್ತಮ್ಮನನ್ನು ಗುಂಡಿಕ್ಕಿ ಕೊಂದ ಪಾಪಿ ಮಗಮುಂದಿನ ವರ್ಷ ರಾಜ್ಯದಲ್ಲಿ ದ್ವಿಭಾಷಾ ಶಿಕ್ಷಣ ನೀತಿ ಜಾರಿ : ಮಧು ಬಂಗಾರಪ್ಪ ಒಂದು ವರ್ಷದವರೆಗೂ ಯಾರು ಚಿನ್ನ ಖರೀದಿಸಬೇಡಿ : ಮೋದಿ ಮಾತಿನ ಮರ್ಮವೇನು..?