ಸೇಡಂ: ಬಡವರ ಹಾಗೂ ಶ್ರಮಿಕರ ಪರವಾಗಿ ಕೆಲಸ ಮಾಡಲು ನಮ್ಮ ಸರಕಾರ ಬದ್ಧವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
2024-25ನೇ ಸಾಲಿನ ಮಳೆ ಪರಿಹಾರದ ಕಾರ್ಯಕ್ರಮ ಲೆಕ್ಕ ಶೀರ್ಷಿಕೆ 5054 ರ ಅಡಿಯಲ್ಲಿ ಮಂಜೂರಾದ ಸೇಡಂ ತಾಲೂಕಿನ ಗಂಗಾರಾವಲಪಲ್ಲಿಯಿಂದ ಶಹಾಬಾಜಪುರ ರಸ್ತೆಗೆ ಸೇತುವೆ ನಿರ್ಮಾಣ ಹಾಗೂ ರಸ್ತೆ ಸುಧಾರಣೆಯ ಅಂದಾಜು ಮೊತ್ತ 80 ಲಕ್ಷ ರೂಗಳ ಕಾಮಗಾರಿಗೆ ಭೂಮಿ ಪೂಜೆ ಹಾಗೂ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು ಗಂಗಾರಾವಲಪಲ್ಲಿ ಗ್ರಾಮದ ಅಭಿವೃದ್ಧಿಗೆ ಕಾರ್ಯಯೋಜನೆಯಲ್ಲಿ ಅನುದಾನವನ್ನಿರಿಸಿ ಸಾಕಷ್ಟು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಪ್ರತಿ ಮಳೆಗಾಲದಲ್ಲಿ ಗಂಗಾರಾವಲಪಲ್ಲಿಯ ಸೇತುವೆ ಸಂಚಾರಕ್ಕೆ ಸಮಸ್ಯೆಯಾಗುತ್ತಿತ್ತು, ಇದೀಗ 80 ಲಕ್ಷ ರೂಗಳ ಅನುದಾನದಲ್ಲಿ ಸೇತುವೆ ಕಾಮಗಾರಿ ಹಾಗೂ ರಸ್ತೆ ಸುಧಾರಣೆಗೆ ಅಡಿಗಲ್ಲು ಹಾಕಲಾಗಿದೆ ಎಂದರು.
ಸೇಡಂ ಮತಕ್ಷೇತ್ರದ ಅಭಿವೃದ್ಧಿಗೆ ವಿವಿಧ ಯೋಜನೆಗಳ ಮೂಲಕ ಪ್ರಗತಿಗೆ ಪಥವನ್ನು ಸೃಷ್ಟಿಸುತ್ತಿದ್ದು, ಗಂಗಾರಾವಲಪಲ್ಲಿಯ ಜನರ ಪ್ರೀತಿ, ಪ್ರೋತ್ಸಾಹ ಸದಾ ಬೆಂಬಲಬಾಗಿರಲಿ ಎಂದು ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅನೇಕ ಮುಖಂಡರು ಹಾಗೂ ಅಧಿಕಾರಿ ವರ್ಗದವರು, ಗಂಗಾರಾವಲಪಲ್ಲಿ ಪ್ರಮುಖರು ಉಪಸ್ಥಿತರಿದ್ದರು.
ವರದಿ ವೆಂಕಟಪ್ಪ ಕೆ ಸುಗ್ಗಾಲ್.

