ಹುಬ್ಬಳ್ಳಿ : ಸಭಾಪತಿ ಸ್ಥಾನಕ್ಕೆ ಬಸವರಾಜ್ ಹೊರಟ್ಟಿ ಈಗಾಗಲೇ ರಾಜೀನಾಮೆ ನೀಡಿದ್ದು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಅವರು ಪ್ರತಿಕ್ರಿಯೆ ನೀಡಿದ್ದು, ಅನಿವಾರ್ಯವಾಗಿ ನಾನು ರಾಜೀನಾಮೆ ಪತ್ರಿಕೆ ಸಹಿ ಹಾಕಿದೆ ಎಂದು ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಬಸವರಾಜ ಹೊರಟ್ಟಿ ಹೇಳಿಕೆ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾನು ಆಗಸ್ಟ್ 14ರಂದು ಅಭಿನಂದನೆ ಹೇಳಿ ರಾಜೀನಾಮೆ ನೀಡುತ್ತೇನೆ ಅಂತ ಹೇಳಿದ್ದೆ. ಆದರೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಮ್ಮ ನಡುವೆ ಒಪ್ಪಂದ ಆಗಿತ್ತು. ರಾಜೀನಾಮೆ ಪತ್ರ ಕೂಡ ಸಿದ್ದ ಮಾಡಿದ್ದೆ.
ಆಗಸ್ಟ್ 7 ರಂದು ಗಾಯತ್ರಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಆಯ್ತು, ಈ ವೇಳೆ ಸಿ+`ಎಂ ಸೇರಿದಂತೆ ಅನೇಕರು ನನ್ನ ಕಚೇರಿಗೆ ಬಂದಿದ್ದರು.ಆಗ ಸಿಎಂ ಅವರು ಹಿಂದೆ ರಾಜೀನಾಮೆ ನೀಡಬೇಕು ಅಂತ ಹೇಳಿದರು.
ಆಗಸ್ಟ್ 14ರಂದು ನಾನು ರಾಜೀನಾಮೆ ನೀಡುತ್ತೇನೆ ಅಂತ ಹೇಳಿದೆ ಇಲ್ಲ ಎಂದೇ ರಾಜೀನಾಮೆ ನೀಡಬೇಕು ಅಂತ ನನಗೆ ಹೇಳಿದರು.
ಹೀಗಾಗಿ ಅನಿವಾರ್ಯವಾಗಿ ರಾಜೀನಾಮೆ ಪತ್ರಕ್ಕೆ ಸಹಿ ಮಾಡಿಕೊಟ್ಟೆ ಅವರ ಒತ್ತಡಕ್ಕೆ ನನಗೆ ಕಾರಣ ಗೊತ್ತಿಲ್ಲ. ನಾನು ಆಸ್ಪತ್ರೆಯಲ್ಲಿದ್ದಾಗಲೇ ಮುಖ್ಯಮಂತ್ರಿ ಅವರು ಕರೆ ಮಾಡಿದ್ದರು.
ಸಿಎಂ ಕರೆ ಮಾಡಿ ರಾಜೀನಾಮೆ ನೀಡಬೇಕು ಅಂತ ಹೇಳಿದ್ದರು ನಮಗೆ ಒತ್ತಡ ಇದೆ ಆದಕಾರಿ ರಾಜೀನಾಮೆ ನೀಡಬೇಕೆಂದು ಹೇಳಿದರು. 1956 ರಿಂದ ಇಲ್ಲಿಯವರೆಗೆ ಸಭಾಪತಿ ಸ್ಥಾನ ಅವಿಶ್ವಾಸ ಮಾಡಿ ಇಳಿಸಿಲ್ಲ ಅಧಿಕಾರ ಅವಧಿ ಮುಗಿದಲೇ ರಾಜೀನಾಮೆ ಕೊಡಿಸಿಲ್ಲ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿಕೆ ನೀಡಿದರು.


