LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಸಿಂಧನೂರು  ಬಿಜೆಪಿ ಗ್ರಾಮೀಣ ಮಂಡಲ ಬೃಹತ್ ಪ್ರತಿಭಟನೆ!

Advertisement

ಸಿಂಧನೂರು : ಮಳೆ,-ಬೆಳೆ ಇಲ್ಲದೆ ರೈತರು ಸಂಕಷ್ಟದಲ್ಲಿ ಇದ್ದಾರೆ ಹಾಗೂ ಜನ ಜಾನುವಾರುಗಳಿಗೆ ಕುಡಿಯಲು ನೀರು ಇಲ್ಲದಾಗಿದೆ ಹಾಗಾಗಿ  ಸಿಂಧನೂರು ತಾಲೂಕು ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು, ಶೀಘ್ರವೇ ಕಾಲುವೆಗೆ ನೀರು ಬಿಡುವಂತೆ ಭಾರತೀಯ ಜನತಾ ಪಾರ್ಟಿ ಗ್ರಾಮೀಣ ಮಂಡಲ ವತಿಯಿಂದ ನಗರದ ತಹಸಿಲ್ದಾರ್ ಕಛೇರಿ ಮುಂದೆ ಬೃಹತ್‌ ಪ್ರತಿಭಟನೆ ನಡೆಸಿದರು.

ಇದೇ ವೇಳೆ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಮಾತನಾಡಿ ತುಂಗಭದ್ರಾ ಡ್ಯಾಮ್ ನಲ್ಲಿ 70 ಟಿಎಂಸಿ, ನೀರು ಇದೆ ಆದರೂ ರೈತರ ಬೆಳೆಗಳಿಗೆ ನೀರು ಬಿಡುವ ಕೆಲಸ ಸರ್ಕಾರ ಮಾಡುತ್ತಿಲ್ಲ, ಇದರಿಂದ ಮತ್ತಷ್ಟು ರೈತರು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದ್ದು ಕೂಡಲೆ ನೀರು ಬಿಡುವ ಕೆಲಸ ಆಗಬೇಕು ಇಲ್ಲವಾದರೆ ಸರ್ಕಾರಕ್ಕೆ ಮುಂದಿನ ದಿನದಲ್ಲಿ 
 ಕ್ಷೇತ್ರದ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದರು ಈ ಬಾರಿ ಒಂದೊಂದು ಜಿಲ್ಲೆಗೆ ಮೂರು ಮೂರು ಮಂತ್ರಿ ಸ್ಥಾನ ಕೊಟ್ಟಿದ್ದಾರೆ ರಾಯಚೂರು ಜಿಲ್ಲೆಗೆ ಯಾವುದೇ ಸ್ಥಾನ ಕೊಟ್ಟಿಲ್ಲ. ಯಾವ ಕೆಲಸ ಮಾಡದೆ ಖಾತೆಗಳ ಹಂಚಿಕೆಗೆ  ಬಡಿದಾಡುತ್ತಿದ್ದಾರೆ  ಎಂದರು.

ನಂತರ ಬಿಜೆಪಿ ಮುಖಂಡ ಕೆ.ಕರಿಯಪ್ಪ ಮಾತನಾಡಿ ರೈತರ ಬದುಕಿನ ಜೊತೆಗೆ ರಾಜ್ಯ ಸರ್ಕಾರ ಚೆಲ್ಲಾಟ ಆಡುತ್ತಿದೆ ರೈತರು ನೊಂದರೆ ಯಾರಿಗೂ ಒಳ್ಳೆಯದು ಆಗುವುದಿಲ್ಲ ಕೂಡಲೇ ಕಾಲುವೆಗೆ ನೀರು ಬಿಡುವ ಕೆಲಸ ಮಾಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷದಿಂದ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ  ಎಂದರು
 ಸಂದರ್ಭದಲ್ಲಿ: ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡ ಬಸವರಾಜ,ಬಿಜೆಪಿ ಮಂಡಲ ಅಧ್ಯಕ್ಷ ವೆಂಕೋಬ ರಾಮತ್ನಾಳ, ನಗರ ಅಧ್ಯಕ್ಷ ಸಿದ್ದರಾಮೇಶ ಮನ್ನಾಪುರ, ಲಿಂಗರಾಜ್ ಹೂಗಾರ್, ಆದಿಮನಿ ವೀರಲಕ್ಷ್ಮೀ, ಮಾನಂದಮ್ಮ. ಶಿವಮ್ಮ. ರೇಣುಕಮ್ಮ. ಟಿ.ಸುಬ್ಬರಾವ್, ಹಸೇನಪ್ಪ ಸೂಲಂಗಿ, ಬಸವರಾಜ ಉಪ್ಪಳ, ಸಿದ್ದು ಹೂಗಾರ್, ಮುತ್ತು ಬರ್ಸಿ. ಸಿದ್ದಪ್ಪ ಕೋಳಬಾಳ  ಸೇರಿದಂತೆ  ಇತರರು ಇದ್ದರು.

ವರದಿ : ಬಸವರಾಜ ಬುಕ್ಕನಹಟ್ಟಿ, 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅತ್ಯಾಚಾರ ಆರೋಪ: ಐಪಿಎಲ್ ಆಟಗಾರ ಅಭಿಷೇಕ ಪೊರೆಲ್ ಬಂಧನಪತ್ನಿ ಮೇಲಿನ ಅನುಮಾನಕ್ಕೆ ಮನೆಯೊಳಗೆ ಜಿಲೆಟಿನ್ ಕಡ್ಡಿ ಸ್ಫೋಟ : ತಂದೆ-ಮಗಳು ಸಾವು11,000 ಅತಿಥಿ ಶಿಕ್ಷಕರ ನೇಮಕಕ್ಕೆ ಶಾಲಾ ಶಿಕ್ಷಣ ಇಲಾಖೆ ಆದೇಶ ಅನಿವಾರ್ಯವಾಗಿ ರಾಜೀನಾಮೆ ಪತ್ರಿಕೆ ಸಹಿ ಹಾಕಿದೆ : ಬಸವರಾಜ ಹೊರಟ್ಟಿ ಬಾಗಲಕೋಟೆಯಲ್ಲಿ ಬಿಜೆಪಿಯಿಂದ ಭವ್ಯ ತಿರಂಗಾ ಯಾತ್ರೆ:ಗಮನ ಸೆಳೆದ 500 ಮೀಟರ್ ಉದ್ದದ ಬೃಹತ್ ರಾಷ್ಟ್ರಧ್ವಜಅಧಿವೇಶನದಲ್ಲಿ ಬಿ. ನಾಗೇಂದ್ರ ಉತ್ತರಗಳನ್ನು ಬಹಿಷ್ಕರಿಸಲು ಬಿಜೆಪಿ ನಿರ್ಧಾರ ಒಂದೇ ದಿನ ಬರೋಬ್ಬರಿ 8,347 ಕೋಟಿ ರು. ಗಳಿಸಿದ ಎಲಾನ್ ಮಸ್ಕ್ ಹೇಮಾವತಿ ನೀರು ಹರಿಸುವಂತೆ ಒತ್ತಾಯಿಸಿ ಬಿಜೆಪಿ, ಜೆಡಿಎಸ್ ಇಂದ ಬೃಹತ್ ಪ್ರತಿಭಟನೆಸಿಂಧನೂರು  ಬಿಜೆಪಿ ಗ್ರಾಮೀಣ ಮಂಡಲ ಬೃಹತ್ ಪ್ರತಿಭಟನೆ!ಹಾನಗಲ್ ₹5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ರಾಜಕಾಲುವೆಯ ತಡೆಗೋಡೆ ಕುಸಿತ.!ಕಳಪೆ ಕಾಮಗಾರಿ ಆರೋಪ