ಸಿಂಧನೂರು : ದಲಿತ ಸಂಘಟನಾ ಸಮಿತಿ(ರಿ) ಭೀಮ ಘರ್ಜನೆ ಜಿಲ್ಲಾ ಸಮಿತಿ ರಾಯಚೂರು ವತಿಯಿಂದ ದಲಿತ ಚಳುವಳಿ ಪಿತಾಮಹ ಪ್ರೊ.ಬಿ.ಕೃಷ್ಣಪ್ಪ ಅವರ 88ನೇ ಜನ್ಮದಿನಾಚರಣೆ ಕಾರ್ಯಕ್ರಮ ನಗರದ ದಲಿತ ಪರ ಸಂಘಟನೆಗಳ ಒಕ್ಕೂಟ ಕಾರ್ಯಾಲಯ, ಕಾರ್ ಸ್ಟ್ಯಾಂಡ್ ಆವರಣದಲ್ಲಿ 9 ಜುಲೈ 2026 ಗುರುವಾರ ರಂದು ಜರಗಿತು ಎಂದು ರಾಯಚೂರು ಜಿಲ್ಲಾಧ್ಯಕ್ಷ ಶಿವರಾಜ ಉಪ್ಪಲದೊಡ್ಡಿ ತಿಳಿಸಿದರು ಉದ್ಘಾಟಕರಾಗಿ ಸಿ. ದಾನಪ್ಪ ನಿಲೋಗಲ್ ದಲಿತ ಸಾಹಿತಿಗಳು ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರು ಮಸ್ಕಿ, ಅಧ್ಯಕ್ಷತೆ ತಿರುಕಪ್ಪ ಕೆ.ಚಿಕ್ಕೇರಿ ರಾಜ್ಯಾಧ್ಯಕ್ಷರು ಡಿಎಸ್ಎಸ್ ಭೀಮ ಘರ್ಜನೆ, ಮುಖ್ಯ ಭಾಷಣಕಾರರು ಈಶ್ವರ ಹಲಗಿ ಉಪನ್ಯಾಸಕರು ಇವರುಗಳ ಉಪಸ್ಥಿತಿಯಲ್ಲಿ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಬಿ ಕೃಷ್ಣಪ್ಪ ಅವರ 88ನೇ ಜನ್ಮದಿನ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ವೇದಿಕೆಯಲ್ಲಿ ಮುಖಂಡರು ಮಾತನಾಡಿ ರಾಜ್ಯದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಜನಸಾಮಾನ್ಯರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪ್ರೊ.ಕೃಷ್ಣಪ್ಪ ಅವರು ಆದರ್ಶ ವಿಚಾರಗಳನ್ನು ಮೈಗೂಡಿಸಿಕೊಂಡು ನಾಡಿನುದ್ದಕ್ಕೂ ಸಮಾನತೆ ಸಾಮಾಜಿಕ ನ್ಯಾಯ ಹಾಗೂ ಸ್ವಾಭಿಮಾನದ ಸಮಾಜಕ್ಕಾಗಿ ಅವರು ನೀಡಿದ ಕೊಡುಗೆಗಳು, ಆದರ್ಶಗಳು ಮುಂದಿನ ಪೀಳಿಗೆಗಳಿಗೆ ಪೂರ್ತಿಯಾಗಿವೆ ಎಂದು ಸ್ಮರಿಸಿದರು.
ಈ ವೇಳೆ ರಾಜ್ಯ ಗೌರವಾಧ್ಯಕ್ಷ ಬಸವರಾಜ ನಡಲಮನಿ, ರಾಜ್ಯ ಕಾರ್ಯಧ್ಯಕ್ಷರು ಶ್ರೀಮತಿ ಸುಜಾತ.ಯುವ ಘಟಕ ಅಧ್ಯಕ್ಷ ಹನುಮೇಶ್ ರಾಮ್. ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಹಂಪನಾಳ, ಯಮನೂರಪ್ಪ ಪರಾಪುರ ಜಿಲ್ಲಾ ಗೌರವಾಧ್ಯಕ್ಷರು, ಸುರೇಶ್ ಎಲೆಕೂಡ್ಲಿಗಿ ಜಿಲ್ಲಾ ಕಾರ್ಯಧ್ಯಕ್ಷರು, ಕಂಟೆಪ್ಪ ಮಾಟೂರು ಜಿಲ್ಲಾ ಉಪಾಧ್ಯಕ್ಷ. ಪರಶುರಾಮ್ ಬನ್ನಿಗಿಡ ಜಿಲ್ಲಾ ಪ್ರ.ಕಾರ್ಯದರ್ಶಿ, ಹುಲಿಗೇಶ್ ಹುಲಿಯಾರ್ ತಾಲೂಕ ಗೌರವಾಧ್ಯಕ್ಷರು, ದುರ್ಗೇಶ್ ಎಸ್ ಕೆ. ಕಲ್ಮಂಗಿ ತಾಲೂಕ ಅಧ್ಯಕ್ಷರು, ಜಂಬಣ್ಣ ಉಪ್ಪಲದೊಡ್ಡಿ ತಾಲೂಕು ಉಪಾಧ್ಯಕ್ಷ, ಮುಖಂಡರಾದ ಅಲ್ಲಮಪ್ರಭು ಪೂಜಾರ್ ಹುಲುಗಪ್ಪ ಉಪ್ಪಲದೊಡ್ಡಿ ಅಮರೇಶ್ ಗಿರಿಜಾಲಿ. ಭೀಮಣ್ಣ ಉಪ್ಪಲದೊಡ್ಡಿ. ಅಶೋಕ್ ಮೇಗಳ ಮನಿ. ದುರುಗಪ್ಪ ಗುಡಗಲದಿನ್ನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಬಸವರಾಜ ಬುಕ್ಕನಹಟ್ಟಿ,


