ಬೆಳಗಾವಿ : ಸಾಮಾನ್ಯವಾಗಿ ಮನುಷ್ಯ ಏನೇ ಕಷ್ಟ ಬಂದರೂ ದೇವರ ಮೊರೆ ಹೋಗುತ್ತಾನೆ. ಅಥವಾ ಆರ್ಥಿಕ ಸಮಸ್ಯೆ ಆಗಿರಬಹುದು, ಮದುವೆ ಪ್ರೀತಿ ವಿಷಯದಲ್ಲಿ ದೇವರ ಮೊರೆ ಹೋಗುವುದು ಸಹಜ.ಆದರೆ ಇಲ್ಲೊಬ್ಬ ವ್ಯಕ್ತಿ ವಿಚಿತ್ರವಾದ ಹರಕೆ ಹೊತ್ತಿದ್ದು, ಹುಡುಗಿ ಕಾಟದಿಂದ ತಪ್ಪಿಸಿಕೊಳ್ಳಲು ಆತ ರಾಯರ ಮೊರೆ ಹೋಗಿದ್ದಾನೆ.
ಈ ಒಂದು ಘಟನೆ ಬೆಳಗಾವಿಯಲ್ಲಿ ನಡೆದಿದ್ದು ಹುಡುಗಿ ಕಾಟದಿಂದ ತಪ್ಪಿಸಿಕೊಳ್ಳಲು ಭಕ್ತನೊಬ್ಬ ರಾಮದುರ್ಗ ಪಟ್ಟಣದ ರಾಘವೇಂದ್ರ ಸ್ವಾಮಿ ಮಠದ ದೇವರ ಹುಂಡಿ ಎಣಿಕೆ ಮಾಡುವಾಗ ಆತ ಹಾಕಿದ್ದ ಹರಕೆ ಪತ್ರದಲ್ಲಿ ಈ ಒಂದು ವಿಷಯ ಉಲ್ಲೇಖ ಮಾಡಿದ್ದು, ರಾಯರೇ ಆ ಹುಡುಗಿಯಿಂದ ನನ್ನನ್ನು ಕಾಪಾಡು ಎಂದು ಪತ್ರದಲ್ಲಿ ಬರೆದಿದ್ದಾನೆ. ದೇವಸ್ಥಾನದಲ್ಲಿ ಹುಂಡಿ ಎಣಿಕೆ ಮಾಡುವಾಗ ಈ ಒಂದು ಪತ್ರ ಸಿಕ್ಕಿದ್ದು ಇದೀಗ ಈ ಒಂದು ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


