LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ರಾಮಾಯಣದಲ್ಲಿ ಶ್ರೀರಾಮನಿಗಿಂತ ಸೀತೆಯ ವ್ಯಕ್ತಿತ್ವ ಬಹಳ ದೊಡ್ಡದು' : ಡಿ.ಕೆ. ಶಿವಕುಮಾರ್ 

Advertisement

ಬೆಂಗಳೂರು: "ರಾಮಾಯಣದಲ್ಲಿ ಶ್ರೀರಾಮನಿಗಿಂತ ಸೀತೆಯ ವ್ಯಕ್ತಿತ್ವ ಬಹಳ ದೊಡ್ಡದು. ಆಕೆಯ ತ್ಯಾಗ ಹಾಗೂ ಹೋರಾಟದ ಬದುಕು ನಮಗೆಲ್ಲರಿಗೂ ಮಾದರಿಯಾಗಿದೆ.

ಮಹಿಳೆಯರು ಸೃಷ್ಟಿಕರ್ತರಾಗಿದ್ದು, ಸವಾಲುಗಳನ್ನು ಮೆಟ್ಟಿ ನಿಂತು ಉದ್ದಿಮೆ ಕಟ್ಟಿರುವ ಮಹಿಳಾ ಉದ್ಯಮಿಗಳು ಸಮಾಜಕ್ಕೆ ಪ್ರೇರಣೆಯಾಗಿದ್ದಾರೆ" ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಶಂಸಿಸಿದರು. 

ಎಫ್.ಕೆಸಿಸಿಐ ಸಭಾಂಗಣದಲ್ಲಿ ನಡೆದ 'ಉಬುಂಟು' ಸಂಸ್ಥೆಯ 5ನೇ ಆವೃತ್ತಿಯ 'ಅಂತರರಾಷ್ಟ್ರೀಯ ಮಹಿಳಾ ಉದ್ಯಮಿಗಳ ದಿನ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಗ್ರಾಮ ಪಂಚಾಯತಿಯಿಂದ ಸಂಸತ್ತಿನವರೆಗೆ ಮಹಿಳಾ ನಾಯಕತ್ವದ ಅಗತ್ಯವಿದೆ ಎಂದ ಅವರು, ರಾಜ್ಯ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಸಂಪೂರ್ಣ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

 "ಶಕ್ತಿ ಯೋಜನೆಯಡಿ ಮಹಿಳೆಯರು ರಾಜ್ಯಾದ್ಯಂತ ಉಚಿತ ಪ್ರಯಾಣ ಬೆಳೆಸುತ್ತಿದ್ದು, ಇದು ಅವರ ಆತ್ಮವಿಶ್ವಾಸ ಮತ್ತು ಸ್ವಾವಲಂಬನೆಯನ್ನು ಹೆಚ್ಚಿಸಿದೆ. ಬಿಜೆಪಿ ಮತ್ತು ಪ್ರಧಾನಿ ಮೋದಿಯವರ ವಿರೋಧದ ನಡುವೆಯೂ, 'ಗೃಹಲಕ್ಷ್ಮಿ' ಯೋಜನೆಯಡಿ 1.22 ಕೋಟಿ ಮಹಿಳೆಯರಿಗೆ ತಿಂಗಳಿಗೆ 2,000 ರೂ. ತಲುಪಿಸಲಾಗುತ್ತಿದ್ದು, ಇದು ಕುಟುಂಬ ನಿರ್ವಹಣೆಗೆ ಆಸರೆಯಾಗಿದೆ" ಎಂದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಂದೇ ದಿನ 240ಕ್ಕೂ ಹೆಚ್ಚು ಅರ್ಜಿಗಳನ್ನ ವಿಲೇವಾರಿ ಮಾಡಿದ ನ್ಯಾ. ನಾಗಪ್ರಸನ್ನ ಸೆಪ್ಟೆಂಬರ್ 21ರಿಂದ ಮೂರು ದಿನ ವಿಶೇಷ ಅಧಿವೇಶನ ಮೂರನೇ ದಿನಕ್ಕೆ ಕಾಲಿಟ್ಟ ಬಿಜೆಪಿ 'ಬಳ್ಳಾರಿ ಚಲೋ' ಪಾದಯಾತ್ರೆಇಂಗ್ಲೆAಡ್ ತಂಡಕ್ಕೆ ಮರಳಿದ ಸೋನಿ ಬೇಕರ್ಮಹಿಳೆಯರ ಚಾಂಪಿಯನ್ಸ ಟ್ರೋಫಿಗೆ ಭಾರತ ಆತೀಥ್ಯಡಾ.ಸಂದೇಶಗೌಡರ ವೈದ್ಯಕೀಯ ಸೇವೆ ಗ್ರಾಮೀಣ ಜನರಿಗೆ ವರದಾನವಾಗಲಿ :  ಹೆಚ್.ಶರ್ಫುದ್ದೀನ್ ಪೋತ್ನಾಳ. ಸೆ.8 ರಂದು ಗ್ರಾ.ಪಂ. ಸಿಬ್ಬಂದಿಗಳು ಹಾಗೂ ಸ್ವಚ್ಚವಾಹಿನಿಯರ ಬೇಡಿಕೆಗಳ ಈಡೇರಿಕೆಗೆ  ಬೆಂಗಳೂರು ಚಲೋ : ಹೆಚ್.ಶರ್ಫುದ್ದೀನ್ ಪೋತ್ನಾಳ. ಕಿಲ್ಲರ್ BMTCಗೆ ಮತ್ತೊಂದು ಬಲಿ: ಪತ್ನಿ ಕಣ್ಣೆದುರೇ ಪತಿ ದಾರುಣ ಸಾವು ರಾಹುಲ್ ಗಾಂಧಿ ಮೇಲಿನ FIR ಸಂವಿಧಾನ ವಿರೋಧಿ ಕೃತ್ಯ: ಸಿದ್ದರಾಮಯ್ಯ ವಾಗ್ಧಾಳಿ ದುಲಿಪ್ ಟ್ರೋಫಿ : ದಕ್ಷಿಣ ವಲಯ ಪೈನಲ್ ಗೆ