Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಟೆಸ್ಟ್ ಕ್ರಿಕೆಟ್: ಬೃಹತ್ ಮೊತ್ತದತ್ತ ಭಾರತ ದಾಪುಗಾಲು

ಕೆ.ಎಲ್.ರಾಹುಲ್, ಶುಭಮಾನ್ ಗಿಲ್ ಸುಂದರ ಶತಕ

Advertisement


ನ್ಯೂ ಚಂದಿಗಢ: ಕೆ.ಎಲ್. ರಾಹುಲ್ ಹಾಗೂ ನಾಯಕ ಶುಭಮಾನ್ ಗಿಲ್ ಅವರ ಆಕರ್ಷಕ ಶತಕಗಳ ನೆರವಿನಿಂದ ಭಾರತ ಕ್ರಿಕೆಟ್ ತಂಡವು ಇಂದಿಲ್ಲಿ ಅಪಘಾನಿಸ್ತಾನ್ ವಿರುದ್ಧ ಆರಂಭವಾದ ಏಕೈಕ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತದತ್ತ ಮುನ್ನಡೆದಿದೆ.
ಇಲ್ಲಿನ ಮಹಾರಾಜ ಯಧುವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ಮೊದಲ ದಿನದಾಟ ಮುಗಿದಾಗ ಭಾರತ ತಂಡವು ೩ ವಿಕೆಟ್‌ಗೆ ೩೬೮ ರನ್‌ಗಳಿಸಿತ್ತು.
ನಾಯಕ ಶುಭಮಾನ್ ಗಿಲ್ ೧೪೩ ಎಸೆತಗಳಲ್ಲಿ ೧೧ ಬೌಂಡರಿ, ೧ ಸಿಕ್ಸರ್ ನೆರವಿನಿಂದ ೧೦೩ ರನ್‌ಗಳಿಸಿ ಬ್ಯಾಟ್ ಮಾಡುತ್ತಿದ್ದರೆ, ರಿಷಬ್ ಪಂತ್ ೭೦ ಎಸೆತಗಳಲ್ಲಿ ೨ ಬೌಂಡರಿ, ೩ ಸಿಕ್ಸರ್ ನೆರವಿನಿಂದ ೫೦ ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರು.
ಇದಕ್ಕೆ ಮುನ್ನ ಯಶಸ್ವಿ ಜೈಸ್ವಾಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಕೆ.ಎಲ್. ರಾಹುಲ್ ಸರಿಯಾಗಿ ೧೦೦ (೧೬೫ ಎಸೆತ, ೧೧ ಬೌಂಡರಿ) ಉತ್ತಮ ಅಡಿಪಾಯ ಹಾಕಿದರು. ಇನ್ನು ಐಪಿಎಲ್ ನಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ ಮತ್ತೋರ್ವ ಆಟಗಾರ ಸಾಯಿ ಸುದರ್ಶನ್ ಕೂಡ ಜವಾಬ್ದಾರಿಯುತ ಬ್ಯಾಟಿಂಗ್ ಆಡಿ ೮೧ ರನ್‌ಗಳಿಸಿದರು. ಅವರು ೧೦೪ ಎಸೆತಗಳನ್ನು ಎದುರಿಸಿ ೧೩ ಬೌಂಡರಿ ಬಾರಿಸಿದರು.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಟೆಸ್ಟ್ ಕ್ರಿಕೆಟ್: ಬೃಹತ್ ಮೊತ್ತದತ್ತ ಭಾರತ ದಾಪುಗಾಲುಭಾರತ ಟ್ವೆಂಟಿ-೨೦ ತಂಡಕ್ಕೆ ವೈಭವ್ ಸೂರ್ಯವಂಶಿಹಸುವನ್ನು 'ರಾಷ್ಟ್ರೀಯ ಪ್ರಾಣಿ' ಎಂದು ಘೋಷಿಸಿ : ಮುಸ್ಲಿಂ ಸಂಘಟನೆಗಳ ಆಗ್ರಹಪಂಚಾಯಿತಿ ಚುನಾವಣೆಯಲ್ಲೂ ಸ್ಪರ್ಧಿಸದೇ ಇದ್ದ ಮೋದಿ ಸಿಎಂ ಮಾಡಿದ್ಯಾರು? : ಬಿ. ಕೆ ಹರಿಪ್ರಸಾದ್ ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು ಬಿಹಾರದ ಪ್ಲಂಬರ್ ಅಕೌಂಟ್ ಗೆ ಬಂತು 294 ಕೋಟಿ ರೂಪಾಯಿಜಿಪಂ, ತಾಪಂ ಚುನಾವಣೆ : ಕ್ಷಮೆಯಾಚಿಸಿ, 8 ವಾರಗಳ ಹೆಚ್ಚುವರಿ ಕಾಲಾವಕಾಶ ಕೋರಿದ ರಾಜ್ಯ ಸರ್ಕಾರ ಪ್ರೇಯಸಿಯ ಅಗಲಿಕೆಯನ್ನು ತಡೆಯಲಾರದೆ, ಆಕೆಯ ಹುಟ್ಟು ಹಬ್ಬದಂದೇ ಯುವಕ ಆತ್ಮಹತ್ಯೆ ಒಂಟಿಯಾದ ಸಿದ್ದರಾಮಯ್ಯ : ಇತ್ತ ನಮಸ್ಕಾರ ಮಾಡಿ ದಾಟಿದ ಡಿ. ಕೆ ಶಿವಕುಮಾರ್ಬೆಂಗಳೂರಲ್ಲಿ ಈಶ್ವರ್ ಖಂಡ್ರೆಗೆ, ಪೂಜ್ಯರಿಂದ ಆಶಿರ್ವಾದ ಅಭಿಮಾನಿಗಳಿಂದ ಗೌರವ ಸನ್ಮಾನ