ಚಾಮರಾಜನಗರ:-ಒಂದು ದೇಶ, ಒಂದು ಚುನಾವಣೆ. ಖಂಡಿಸಿ ಚಾಮರಾಜನಗರ ಜಿಲ್ಲಾ,ಡಿ ಎಸ್ ಎಸ್ ವತಿಯಿಂದ ಪತ್ರಿಕಾಗೋಷ್ಠಿ ನೆಡಿಸಲಾಯಿತು.
ಮನುವಾದಿ ಬಿಜೆಪಿ ಸರ್ಕಾರ ಸಂವಿಧಾನಕೆ ಬಹುದೊಡ್ಡ ತಿದ್ದುಪಡಿ ಮಾಡಲು ಹೊರಟಿದೆ, ಅಂಬೇಡ್ಕರ್ ನೇತೃತ್ವದಲ್ಲಿ ರೂಪುಗೊಂಡ ಪ್ರಜಾತಂತ್ರ-ಸಂಸದೀಯ ಪ್ರಜಾಪ್ರಭುತ್ವವನ್ನು ತಿರುಚಿ ಸರ್ವಧಿಕಾರಿ ಆಡಳಿತಕೆ ಎಡೇಮಾಡುವ ಅಧ್ಯಕ್ಷೀಯ ಮಾದರಿ ಪ್ರಜಾಪ್ರಭುತ್ವ ಜಾರಿಗೊಳಿಸುವ ಸಲುವಾಗಿ ಏಕ ಚುನಾವಣೆಯನ್ನು ಹೇರಲು ಹೊರಟಿದೆ.
ಇದನ್ನು ಖಂಡಿಸಿ,9/10/2024ರಂದು ಬೆಂಗಳೂರಿನಲ್ಲಿ ಕೊಂಡಜ್ಜಿ ಬಸಪ್ಪ ಮೆಮೊರಿಯಲ್ ಹಾಲ್ ನಲ್ಲಿ “ರಾಜ್ಯ ಮಟ್ಟದ ವಿಚಾರ ಸಂಕಿರಣ ” ನೆಡೆಯುತ್ತಿದ್ದು,ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಜನರು ಭಾಗವಯಿಸುತ್ತಿದ್ದು ಚಾಮರಾಜನಗರ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿದ್ದೇವೆ ಎಂದು ಜಿಲ್ಲಾ ಸಂಚಾಲಕರಾದ ಯರಿಯೂರು ರಾಜಣ್ಣ ತಿಳಿಸಿದರು
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಗುಂಡ್ಲುಪೇಟೆ ನಂಜುಂಡಸ್ವಾಮಿ ಚಾಮರಾಜನಗರ ತಾಲೂಕು ಸಂಚಾಲಕರಾದ ಅನಿಲ್ ಗೂಳಿಪುರ, ಜಿಲ್ಲಾ ಸಂಘಟನಾ ಸಂಚಾಲಕರಾದ ಜಾನಿ ಮ ಮ ಬೆಟ್ಟ , ಶಿವಕುಮಾರ್ ಗುಂಡಪೇಟೆ ತಾಲೋಕು ಸಂಚಾಲಕರು ರಂಗಸ್ವಾಮಿ ಮಾಡ್ರಹಳ್ಳಿ ಹಾಜರಿದ್ದರು.
ವರದಿ :ಸ್ವಾಮಿ ಬಳೇಪೇಟೆ