Ad imageAd image

ಗ್ರಾಮ ಕಾಯಕ ಮಿತ್ರರ ಮೇಲೆ ಚಪ್ಪಲಿಯಿಂದ ಥಳಿಸಿದ ಉಪಾಧ್ಯಕ್ಷೆ

Bharath Vaibhav
ಗ್ರಾಮ ಕಾಯಕ ಮಿತ್ರರ ಮೇಲೆ ಚಪ್ಪಲಿಯಿಂದ ಥಳಿಸಿದ ಉಪಾಧ್ಯಕ್ಷೆ
WhatsApp Group Join Now
Telegram Group Join Now

ವಿಜಯಪುರ : ಗ್ರಾಮ ಪಂಚಾಯಿತಿ​ ಕಾಯಕ ಮಿತ್ರ ಸಿಬ್ಬಂದಿ ಮೇಲೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಚಪ್ಪಲಿಯಿಂದ ಹಲ್ಲೆ ಮಾಡಿರು ಘಟನೆ ದೇವರಹಿಪ್ಪರಗಿ ತಾಲೂಕಿನ ಕೆರೂಟಗಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಸೆ.14ರಂದು ಗ್ರಾಮ ಪಂಚಾಯಿತಿ ಲೆಕ್ಕ ಪರಿಶೋಧನೆ ಗಲಾಟೆ ಉಂಟಾಗಿ ಶರಣಮ್ಮ ಸಂದಿಮನಿ ಎಂಬ ಗ್ರಾಪಂ ಉಪಾಧ್ಯಕ್ಷೆ ಗ್ರಾಪಂ ಕಾಯಕಮಿತ್ರ ದ್ರೌಪದಿ ಹಿರೇಮಠ ಎಂಬುವವರನ್ನು ಅಮಾನವೀಯವಾಗಿ ಥಳಿಸಿದ್ದಾರೆಂಬ ಆರೋಪ ಕೇಳಿಬಂದಿದೆ.

ಇದಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿರುವ ಆರೋಪವೂ ಇದೆ. ಸೆ.17ರಂದು ದ್ರೌಪದಿ ಹಿರೇಮಠ ಮೇಲೆ ಉಪಾಧ್ಯಕ್ಷೆಯ ಪತಿ ರಾಜಶೇಖರನೂ 2ನೇ ಬಾರಿ ಹಲ್ಲೆ ಮಾಡಿದ್ದಾನೆಂಬ ಆಪಾದನೆ ಇದೆ. ಈ ಸಂಬಂಧ ಸರ್ಕಾರಿ ಸೇವೆಗೆ ಅಡ್ಡಿ ಆರೋಪದಡಿ ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!