ಗೋಕಾಕ : ಡಾ: ಬಿ,ಆರ್, ಅಂಬೇಡ್ಕರ ಜಯಂತಿ ಕೇವಲ ಒಂದೆ ದಿನಕ್ಕೆ ಸಿಮಿತವಾಗದೆ 365 ದಿನಗಳೂ ಕೂಡ ಅವರನ್ನು ನೆನಪಿಸಿಕೊಳ್ಳಬೇಕು ಎಂದು ಗೋಕಾಕ ತಾಲೂಕಿನ ದುಪದಾಳದಲ್ಲಿ ಘಟಪ್ರಬಾದ CPI ಎಚ್,ಡಿ,ಮುಲ್ಲಾ ಇವರು
ಗೋಕಾಕ ತಾಲೂಕಿನ ದುಪದಾಳ ಗ್ರಾಮದಲ್ಲಿ 135 ನೆಯ ಡಾ: ಬಿ,ಆರ್, ಅಂಬೇಡ್ಕರ ಅವರ ಜಯಂತಿ ನಿಮಿತ್ಯ ಮಹಾಪುರುಷ ಡಾ: ಅಂಬೇಡ್ಕರ ಪುತ್ಥಳಿಗೆ ಮಾಲೆ ಹಾಕಿ ನಮಿಸಿ ಯುವಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಡಾ: ಬಿ,ಆರ್, ಅಂಬೇಡ್ಕರ ಅವರು ಓದಲಿಕ್ಕೆ ಪಟ್ಟ ಕಷ್ಟ ಈಗಿನ ಯುವಕರಿಗೆ ಬಂದಿಲ್ಲಾ, ಓದಿ ಶಿಕ್ಷಣ ಮೂಲಕ ಜಗತ್ತಿಗೆ ಮಾದರಿಯಾಗಿದ್ದರೆ ,ಈಗಿನ ಯುವಕರು ಅವರಂತೆ ಆಗದಿದ್ದರೂ ಕೂಡಾ ಅವರ ಆದರ್ಶಗಳನ್ನು ಮನೆ ಮನೆ ತಲುಪಿಸುವಂತಾಗಬೇಕು. ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ಜಯಂತಿಗಳಿಗೆ ಮಹತ್ವ ಬರುತ್ತದೆ ಎಂದರು.
ಅದೆ ರೀತಿ ಕೊಣ್ಣೂರಿನ ಆಚಾರ್ಯ ಶಾಂತಿಸಾಗರ ಶಿಕ್ಷಣ ಸಂಸ್ಥೆಯಲ್ಲಿ ಭಕ್ತಿ ಪೂರ್ವಕವಾಗಿ ಶಿಕ್ಷಕಿಯರು ಮತ್ತು ಆಡಳಿತ ಮಂಡಳಿಯ ಸದಸ್ಯರು ಡಾ: ಬಾಬಾಸಾಹೇಬ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಅವರ ಜನ್ಮ ಜಯಂತಿಯನ್ನು ಗ್ರೀನ ಬೊರ್ಡ ಮೇಲೆ ಅವರ ನುಡಿಮುತ್ತುಗಳನ್ನು ಬರೆಯುವದರ ಮೂಲಕ ವಿಶೇಷವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ದುಪದಾಳ ಗ್ರಾಮದ ಸುನೀಲ ಕೊಟಬಾಗಿ, ವಿನೋದ ಮೇತ್ರಿ, ಪ್ರಕಾಶ, ಸೇರಿದಂತೆ ಇನ್ನೂಳಿದ ಯುವಕರು ಮತ್ತು ಶಾಂತಿಶಾಗರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರಾದ ಸಚಿನ ಸಮಯ, ಮಹಾವೀರ ಬೂದಿಗೊಪ್ಪ,ಮಾಹಾವೀರ ಪಾಟೀಲ ಮತ್ತು ಸರ್ವ ಶಿಕ್ಷಕಿಯರು ಉಪಸ್ಥಿತರಿದ್ದರು.
ವರದಿ : ಮನೋಹರ ಮೇಗೇರಿ




