ಯರಗಟ್ಟಿ: ಸಮೀಪದ ಉದಪುಡಿ ಗ್ರಾಮದಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಂದ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ ಮಹಾಅಭಿಷೇಕ ಮತ್ತು ಅನ್ನಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.
ನಂತರ ಸತತವಾಗಿ 18 ವರ್ಷ ಶಬರಿಮಲೆಗೆ ಯಾತ್ರೆ ಮಾಡುತ್ತಿರುವ ಅಯ್ಯಪ್ಪ ಸ್ವಾಮಿಯ ಮಾಲಾದಾರಿಗಳಿಗೆ ಸನ್ಮಾನಿಸಿದರು.
ಈ ವೇಳೆ ಸಾಲಹಳ್ಳಿ ರುದ್ರಗೌಡ ಗುರುಸ್ವಾಮಿ ಅಯ್ಯಪ್ಪ ಸ್ವಾಮಿಯ ಮಹಾಪೂಜೆಯ ವಿಧಿ ವಿಧಾನಗಳನ್ನು ನೇರವೇರಿಸಿದರು.
ಈ ಸಂದರ್ಭದಲ್ಲಿ ಕಟಕೋಳ ಈರಣ್ಣಾ ಗುರುಸ್ವಾಮಿ, ಕೆ. ಚಂದರಗಿ ಬಸವರಾಜ ಗುರುಸ್ವಾಮಿ, ಸಾಲಹಳ್ಳಿ ಅಶೋಕ ಗುರುಸ್ವಾಮಿ, ಗುದಗೊಪ್ಪ ಪ್ರಕಾಶ ಗುರುಸ್ವಾಮಿ, ಸೊಪ್ಪಡ್ಲ ಮಹಾಂತೇಶ ಗುರುಸ್ವಾಮಿ, ಬನ್ನೂರು ಅಪ್ಪೇಶ ಗುರುಸ್ವಾಮಿ, ಯರಗಟ್ಟಿ ಆನಂದ ಗುರುಸ್ವಾಮಿ ಉದಪುಡಿ ಕೃಷ್ಣಾ ಗುರುಸ್ವಾಮಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಇದ್ದರು.
ವರದಿ : ಈರಣ್ಣಾ ಹೂಲ್ಲೂರ




