Ad imageAd image

ಬಾಗಲಕೋಟೆ, ಕೊಪ್ಪಳದಲ್ಲಿಯೂ ಮತಗಳ್ಳತನ ಆರೋಪ 

Bharath Vaibhav
ಬಾಗಲಕೋಟೆ, ಕೊಪ್ಪಳದಲ್ಲಿಯೂ ಮತಗಳ್ಳತನ ಆರೋಪ 
Breaking News
WhatsApp Group Join Now
Telegram Group Join Now

ಬಾಗಲಕೋಟೆ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಲೋಕಸಭಾ ಚುನಾವಣೆಯಲ್ಲಿ ಮಹದೇವಪುರ ಮತಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸಿದ್ದರು.

ಬಳಿಕ ಆಳಂದ್ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂದು ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ ಸಹ ಆರೋಪಿಸಿದ್ದರು.ಕಳೆದ ಕೆಲವು ದಿನಗಳ ಹಿಂದೆ SIT ಸಹ ಮಾಜಿ ಶಾಸಕ ಸುಭಾಷ್ ಗುತ್ತೇದಾರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಇದೀಗ ಬಾಗಲಕೋಟೆಯಲ್ಲಿ ಸಹ ಮತಗಳ್ಳತನ ಆರೋಪ ಕೇಳಿಬಂದಿದೆ. ವೋಟಿಂಗ್ ಲೀಸ್ಟ್ ನಲ್ಲಿ ಅಪ್ರಾಪ್ತರ ಹೆಸರು ಸೇರ್ಪಡೆ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಮುರಡಿ ಗ್ರಾಮದ ಮತಪಟ್ಟಿಯಲ್ಲಿ ಅಪ್ರಾಪ್ತರ ಹೆಸರು ಸೇರ್ಪಡೆ ಮಾಡಲಾಗಿದೆ.

18 ವರ್ಷದೊಳಗಿನ 6 ಅಪ್ರಾಪ್ತರ ಹೆಸರು ಮತಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಮುರಡಿ ಗ್ತಾಮದಲ್ಲಿ ನಡೆದಿದೆ.

ಶರಣಪ್ಪ ಗೋಣಿ, ಯಲ್ಲಾಲಿಂಗ ಬನ್ನಿ, ಭೀಮಪ್ಪ ಬನ್ನಿ, ಪ್ರದೀಪ್ ಬನ್ನಿ, ಮಂಜುನಾಥ್ ಬನ್ನಿ ಹಾಗು ಮಹಾಂತೇಶ್ ಗೋಣಿ ಎಂಬುವವರ ಹೆಸರು ಸೇರ್ಪಡೆ ಮಾಡಲಾಗಿದೆ.

15, 16, 17 ವಯೋಮಾನದವರ ಹೆಸರು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಅಲ್ಲದೇ ಕೊಪ್ಪಳ ಜಿಲ್ಲೆಯ ಕುಷ್ಟಗಿಯ 6 ಜನರ ಹೆಸರು ಸೇರ್ಪಡೆ ಮಾಡಲಾಗಿದೆ. ಮುರಡಿ ಗ್ರಾಮದ ಮತದಾರರ ಪಟ್ಟಿಯಲ್ಲಿ ಅಪ್ರಾಪ್ತರ ಹೆಸರು ಸೇರ್ಪಡೆ ಮಾಡಲಾಗಿದೆ.

ಕೊಪ್ಪಳ ಜಿಲ್ಲೆ ಕುಷ್ಟಗಿಯ ಹುಲಿಗೆವ್ವ, ರಂಗಪ್ಪ, ಶಾಂತಪ್ಪ ಶಾಂತಗೇರಿ, ಪಡಿಯಪ್ಪ, ರಂಗಪ್ಪ ಶಾಂತಗೇರಿ, ಶಾಂತವ್ವ ಶಾಂತಗೇರಿ ಹೆಸರು ಪತ್ತೆಯಾಗಿದೆ. ಕುಷ್ಟಗಿಯಲ್ಲಿ ಡಿಲೀಟ್ ಆಗಿಲ್ಲ ಆದರೆ ಮುರಡಿಯ ಮತಪಟ್ಟಿಯಲ್ಲಿ ಹೆಸರಿದೆ. ಎರಡು ಕಡೆ ಮತಪಟ್ಟಿಯಲ್ಲೂ ಹೆಸರು ಇವೆ ಎಂದು ಆರೋಪಿಸಲಾಗಿದೆ. ನಕಲಿ ಜನ್ಮ ದಾಖಲಾತಿ ಸೃಷ್ಟಿಸಿ ಮತಪಟ್ಟಿಗೆ ಸೇರ್ಪಡೆ ಮಾಡಿರುವ ಆರೋಪಿಸಲಾಗಿದೆ.

ಹುನಗುಂದ ತಾಲೂಕ ಪಂಚಾಯತ್ ಮಾಜಿ ಸದಸ್ಯರು ಹಾಗು ಸ್ಥಳೀಯರಿಂದ ಆರೋಪ ಕೇಳಿಬಂದಿದೆ.ಮುರಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾವಕ್ಕ ಮಗ ಶಿವಾನಂದ್ ಬನ್ನಿ ಮೇಲೆ ಶಂಕೆ ವ್ಯಕ್ತಪಡಿಸಲಾಗಿದೆ. ಈ ಹಿನ್ನೆಲೆ ಬಾಗಲಕೋಟೆ ಡಿಸಿ, ಇಳಕಲ್ ತಹಸೀಲ್ದಾರ್ ಗೆ ದೂರು ನೀಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!