Ad imageAd image

ಕಲಘಟಗಿ ಹಿರೆಹೋನ್ನಹಳ್ಳಿಯ ಗ್ರಾಮದಲ್ಲಿ ಅಕ್ರಮ ಸರಾಯಿ ಮಾರುತ್ತಿದ್ದವರ ಬಂಧನ.

Bharath Vaibhav
ಕಲಘಟಗಿ ಹಿರೆಹೋನ್ನಹಳ್ಳಿಯ ಗ್ರಾಮದಲ್ಲಿ ಅಕ್ರಮ ಸರಾಯಿ ಮಾರುತ್ತಿದ್ದವರ ಬಂಧನ.
WhatsApp Group Join Now
Telegram Group Join Now

ಹಿರೆಹೋನಹಳ್ಳಿ:ಗ್ರಾಮದಲ್ಲಿ ಅಕ್ರಮ ಸರಾಯಿ ಮಾರುತ್ತಿರುವ ಬಗ್ಗೆ ಗ್ರಾಮಸ್ಥರಿಂದ ನಮ್ಮ ಮಾಧ್ಯಮಕ್ಕೆ ತಿಳಿಸಲಾಯಿತು. ಇದನ್ನು ಕಲಘಟಗಿ ಅಬಕಾರಿ ಇನ್ಸ್ಪೆಕ್ಟರ್ ಶಿವಪ್ಪ ಸಣ್ಣಮಣಿ ಅವರಿಗೆ ತಿಳಿಸಲಾಯಿತು. ಅವರ ಸಿಬ್ಬಂದಿ ಜೊತೆಗೆ ಅಕ್ರಮ ಸರಾಯಿ ಮಾರಾಟ ಸ್ಥಳಕ್ಕೆ ಬಂದು ಸ್ಥಳ ಪರಿಶೀಲನೆ ಮಾಡಿ ಮಾರಾಟಗಾರರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಯಿತು. ಕಲಘಟಗಿ ಅಬಕಾರಿ ಇನ್ಸ್ಪೆಕ್ಟರ್ ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತಪಡಿಸಲಾಯಿತು. ಹಳ್ಳಿಗಳಲ್ಲಿ ಈ ತರಹ ಅಕ್ರಮ ಸರಾಯಿ ಮಾರುವುದರಿಂದ ಎಷ್ಟು ಅಮಾಯಕರು ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ . ಯುವಕರ ಕುಡಿತದ ಚಟದಿಂದ ಕುಟುಂಬಸ್ಥರ ನೆಮ್ಮದಿಯೇ ಹಾಳಾಗಿದೆ ಎಂದು ನೊಂದ ಕುಟುಂಬಗಳು ಕಣ್ಣೀರು ಹಾಕುತ್ತಿದೆ ಇನ್ನಾದರೂ ಈ ರೀತಿ ಆಗದಂತೆ ಸಂಬಂಧಪಟ್ಟ ಇಲಾಖೆಗಳು ಗಮನ ಹರಿಸಬೇಕಾಗಿದೆ.


ವರದಿ : ಗುರುರಾಜ ಹಂಚಾಟೆ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!