ಬೆಂಗಳೂರು: ಮೆಜೆಸ್ಟಿಕ್ ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ. ಕೆಎಸ್ಆರ್ಟಿಸಿ ಬಸ್ ಟಿಕೆಟ್ ಮಷಿನ್ ಕಳವು ಮಾಡಿಕೊಂಡು ಹೋಗಿದ್ದಾರೆ.
ಬೆಂಗಳೂರು -ಶಿರಸಿ ನಾನ್ ಎಸಿ ಸ್ಲೀಪರ್ ಬಸ್ ನಲ್ಲಿ ಘಟನೆ ನಡೆದಿದೆ. ಚಾಲಕ, ನಿರ್ವಾಹಕರ ಬ್ಯಾಗ್ ಸಮೇತ ಕಳ್ಳರು ಹೊತ್ತುಕೊಂಡು ಹೋಗಿದ್ದಾರೆ.
ಇದರಿಂದಾಗಿ ಸುಮಾರು ಎರಡು ಗಂಟೆ ಮೆಜೆಸ್ಟಿಕ್ ನಲ್ಲಿ ಚಾಲಕ, ನಿರ್ವಾಹಕ ಹಾಗೂ ಪ್ರಯಾಣಿಕರು ಪರದಾಟ ನಡೆಸಿದ್ದಾರೆ.
ಬಸ್ ಕಂಡಕ್ಟರ್ ಬ್ಯಾಗ್ ನಲ್ಲಿದ್ದ ಟಿಕೆಟ್ ಮಷಿನ್ ಕಳ್ಳತನ ಮಾಡಲಾಗಿದ್ದು, ಮಷಿನ್ ಇಲ್ಲದೆ ತಡರಾತ್ರಿವರೆಗೂ ಬಸ್ ನಿಂತಲ್ಲೇ ನಿಂತಿತ್ತು. ಕೊನೆಗೆ ಮ್ಯಾನುಯಲ್ ಟಿಕೆಟ್ ನೀಡಿ ಸರ್ವಿಸ್ ಆರಂಭಿಸಲಾಗಿದೆ.
ಖದೀಮರು ಬ್ಯಾಗ್ ಕದ್ದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




