Ad imageAd image

ಬೈಕ್ ಡಿಕ್ಕಿಯಾದ ಬಸ್ : ಒಂದೇ ಕುಟುಂಬದ ಐವರು ದಾರುಣ ಸಾವು 

Bharath Vaibhav
ಬೈಕ್ ಡಿಕ್ಕಿಯಾದ ಬಸ್ : ಒಂದೇ ಕುಟುಂಬದ ಐವರು ದಾರುಣ ಸಾವು 
WhatsApp Group Join Now
Telegram Group Join Now

ಯಾದಗಿರಿ: ಯಾದಗಿರಿಯಲ್ಲಿ ಸಂಭವಿಸಿದ ಬಸ್ ಹಾಗೂ ಬೈಕ್ ಅಪಘಾತ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ. ದುರಂತದಲ್ಲಿ ಐವರು ಮೃತಪಟ್ಟಿದ್ದಾರೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಬಳಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿತ್ತು.ಸ್ಥಳದಲ್ಲೇ ಇಬ್ಬರು ಮಕ್ಕಳು ಸೇರಿ ಮೂವರು ಸಾವನ್ನಪ್ಪಿದ್ದರು.

ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮಾರ್ಗ ಮಧ್ಯೆಯೇ ಇಬ್ಬರೂ ಕೊನೆಯುಸಿರೆಳೆದಿದ್ದಾರೆ.

ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಬಲಿಯಾಗಿದೆ. ಒಂದು ವರ್ಷದ ಮಗು ಹನುಮಂತ, ತಂದೆ ಆಂಜನೇಯ (35) ತಾಯಿ ಗಂಗಮ್ಮ (28), ಪವಿತ್ರಾ (5) ಹಾಗೂ ರಾಯಪ್ಪ (3) ಮೃತ ದುರ್ದೈವಿಗಳು

ಮೂವರು ಮಕ್ಕಳ ಜೊತೆ ದಂಪತಿ ಒಂದೇ ಬೈಕ್ ನಲ್ಲಿ ಸುರುಪುರದಿಂದ ತಿಂಥಣಿ ಕಡೆಗೆ ತೆರಳುತ್ತಿದ್ದರು. ಈ ವೇಳೆಸಾರಿಗೆ ಬಸ್ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.

WhatsApp Group Join Now
Telegram Group Join Now
Share This Article
error: Content is protected !!