ನಂಜನಗೂಡು : ಹೊಲ, ಗದ್ದೆ, ತೋಟಗಳಿಗೆ ಯಾರ ದೃಷ್ಟಿ ತಾಗಬಾರದು ಎಂದು ಒಂದು ವಿಕಾರವಾದ ಗೊಂಬೆ ಹಾಕಲಾಗುತ್ತೆ. ಪ್ರಾಣಿಗಳು ಬಂದು ಬೆಳೆ ಹಾಳು ಮಾಡಬಾರದು ಎಂದು ಕೆಲವರು ಹೊಲ, ಗದ್ದೆಗಳಲ್ಲಿ ಮನುಷ್ಯ ರೀತಿ ಇರುವ ಪ್ರತಿಕೃತಿಯನ್ನು ತಯಾರಿಸಿ ಹಾಕುತ್ತಾರೆ.
ಆದ್ರೆ, ನಂಜನಗೂಡು ತಾಲೂಕಿನ ಕಕ್ಕರಹಟ್ಟಿ ಗ್ರಾಮದ ರೈತರೊಬ್ಬರು ತಮ್ಮ ಬಾಳೆ ತೋಟದ ಮೇಲೆ ಯಾರ ವಕ್ರ ದೃಷ್ಟಿಯೂ ಬೀಳಬಾರದು ಎಂದು ದೃಷ್ಟಿ ದೋಷ ನಿವಾರಣೆಗೆ ಜಮೀನಿನ ಸುತ್ತಲೂ ಸುಮಾರು 10 ಸ್ಥಳಗಳಲ್ಲಿ ಮಾಡೆಲ್ ಫೋಟೋ ನೇತುಹಾಕಿದ್ದಾರೆ.
ನಂಜನಗೂಡು ತಾಲೂಕಿನ ಕಕ್ಕರಹಟ್ಟಿ ಗ್ರಾಮದ ರೈತ ಸೋಮೇಶ್ ಎಂಬುವವರು ತನ್ನ ನಾಲ್ಕು ಎಕರೆ ಜಮೀನಿನಲ್ಲಿ ಬಾಳೆ ಬೆಳೆ ಬೆಳೆದಿದ್ದರು. ಅದರಂತೆ ಬೆಳೆ ಕೂಡ ಉತ್ತಮವಾಗಿ ಬಂದ ಒಳ್ಳೆಯ ಫಸಲು ಬಂದು ಒಳ್ಳೆ ಲಾಭ ಸಿಗಲಿ ಎನ್ನುವ ಕಾರಣಕ್ಕೆ ದೃಷ್ಟಿ ಬೊಂಬೆ ಬದಲು ನಟಿಯರ ಭಾವಚಿತ್ರ ಅಳವಡಿಸಲಾಗಿದೆ.
ಸದ್ಯ ರೈತನ ಈ ಐಡಿಯಾಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ನಾವು ಕೂಡ ಇದೇ ರೀತಿ ದೃಷ್ಟಿಗೊಂಬೆಯ ಬದಲು ಮಾಡೆಲ್ ಗಳ ಫೋಟೋವನ್ನು ಹಾಕುತ್ತೇವೆ ಎಂದು ಹೇಳಿದ್ದಾರೆ.