Ad imageAd image

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯಗಳ ನಿಲಯರ್ಥಿಗಳ ಕ್ರೀಡಾಕೂಟ

Bharath Vaibhav
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯಗಳ ನಿಲಯರ್ಥಿಗಳ ಕ್ರೀಡಾಕೂಟ
WhatsApp Group Join Now
Telegram Group Join Now

ಚಿಕ್ಕಬಳ್ಳಾಪುರ : ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯಗಳ ನಿಲಯರ್ಥಿಗಳ ಕ್ರೀಡಾಕೂಟವನ್ನು kv ವೆಂಕಟಪ್ಪ ಬಿಎಡ್ ಕಾಲೇಜ್ ಮೈದಾನದಲ್ಲಿ ನಡೆಸಲಾಯಿತು.ಓದು.ಬರಹ ಅದರ ಜೊತೆಗೆ ಕ್ರೀಡೆಗಳು ಮುಖ್ಯವಾದುದು. ದೈಹಿಕ ವಾಗಿ ಮಾನಸಿಕವಾಗಿ ಭಾವನಾತ್ಮಕವಾಗಿ ಸಮತೋಲನವನ್ನು ಕ್ರೀಡೆ ಕಾಪಾಡುತ್ತದೆ ಹಾಗೂ ಪ್ರತಿದಿನ ನಿರಂತರವಾಗಿ ವ್ಯಾಯಾಮ ಇರಲಿ ಎಂದು ಕ್ರೀಡಾಕೂಟಕ್ಕೆ ಶ್ರೀ kv ಮುನಿರತ್ನಮ್ಮ ಜಿಲ್ಲಾ ಅಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಚಿಕ್ಕಬಳ್ಳಾಪುರವರು ಕ್ರೀಡಾ ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಸರ್ಕಾರಿ ಉದ್ಯೋಗದಲ್ಲಿ ಕ್ರೀಡಾಪಟುಗಳಿಗೂ ಮೀಸಲಾತಿ ಇರುವುದರಿಂದ ಅದನ್ನು ಉಪಯೋಗಿಸಬೇಕೆಂದು ಡಾ//ಪ್ರಸನ್ನ ಅಸಿಸ್ಟೆಂಟ್ ಪ್ರೊಫೆಸರ್ ವಿಟಿಯು ಕಾಲೇಜ್ ಮುದ್ದೇನಹಳ್ಳಿ ರವರು ತಿಳಿಸಿದರು. ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್ ಹಾಗೂ ವಾಲಿಬಾಲ್. ಥ್ರೋ ಬಾಲ್ ಕ್ರಿಕೆಟ್ . ಹಗ್ಗ ಜಗ್ಗಾಟ ಇನ್ನಿತರ ಆಟಗಳನ್ನು ನಡೆಸಲಾಯಿತು. ವಿವಿಧ ನಿಲಯದ ನಿಲಯಾರ್ಥಿಗಳು ತುಂಬಾ ಖುಷಿಯಿಂದ ಕ್ರೀಡೆಗಳಲ್ಲಿ ಪಾಲ್ಗೊಂಡರು.ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು. ಆಟಗಳು ಮುಗಿದ ನಂತರ ಟ್ರೋಫಿ ಮತ್ತು ಮೆಡಲ್ ಗಳನ್ನು ನಗದು ಮೊತ್ತವನ್ನು ಶ್ರೀಮತಿ ಶ್ವೇತಾ ಜಿ ಆರ್ ಅಸ್ಟೆಂಟ್ ಪ್ರೊಫೆಸರ್ sjcit ಕಾಲೇಜು ರವರು ವಿತರಿಸಿದರು ರ್ಕಾರ್ಯಕ್ರಮದಲ್ಲಿ kvಬಿಪಿಎಡ್ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ವೆಂಕಟೇಶ್. ಬಿಜಿಎಸ್ ಬಿಪಿಎಡ್ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಶಿವಶಂಕರ್ . ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಶ್ರೀಮತಿ ಕುಸುಮಾ ಭಟ್. ವಿಟಿಯು ಕಾಲೇಜಿನ ಅಸ್ಟೆಂಟ್ ಪ್ರೊಫೆಸರ್ ಡಾಕ್ಟರ್ ಪ್ರಸನ್ನ . ನಿಲಯ ಪಾಲಕರಾದ ಡಿ ವೈ ಮಂಜುನಾಥ್. ವರಲಕ್ಷ್ಮಿ. ನಿಲಯ ಮೇಲ್ವಿಚಾರಕರಾದ ವೇಣು. ಶುಭ ಮತ್ತು ಅಡುಗೆ ಸಿಬ್ಬಂದಿಯವರು ಹಾಜರಿದ್ದರು.

ವರದಿ :ಯಾರಬ್. ಎಂ

WhatsApp Group Join Now
Telegram Group Join Now
Share This Article
error: Content is protected !!