ಕ್ರೀಡಾಕೂಟಕ್ಕೆರಾಯಚೂರು ಜಿಲ್ಲಾಧಿಕಾರಿ ನಿತೀಶ್. ಕೆ. ಚಾಲನೆ
ರಾಯಚೂರು : ರಾಯಚೂರು ನಗರದ ಕೃಷಿ ವಿವಿ ಆವರಣದಲ್ಲಿ ಜಿಲ್ಲಾ ಪಂಚಾಯತ ನೌಕರರ ವಾರ್ಷಿಕ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಕೆ.ನಿತೀಶ್ ಚಾಲನೆ ನೀಡಿದ್ರು. ಚಾಲನೆ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಕೆ.ನಿತೀಶ್, ಆರ್ ಡಿಪಿಆರ್ ನೌಕರರು ಸದಾಕಾಲ ಒತ್ತಡದ ಮಧ್ಯೆಯೇ ಕೆಲಸ ಮಾಡಬೇಕಾಗಿದೆ.
ಅದರಲ್ಲೂ ಪಿಡಿಒಗಳು ತಮ್ಮ ಕರ್ತವ್ಯದ ಮಧ್ಯೆ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು ನೋಡಿ ತಮ್ಮ ಖುಷಿಯಾಯ್ತು. ಈ ಭಾಗದಲ್ಲಿ ಪಿಡಿಒಗಳ ಮೇಲೆ ಜವಾಬ್ದಾರಿ ಹೆಚ್ಚಾಗಿ ಇರುತ್ತೆ, ಎಲ್ಲರೂ ಸರಿಯಾಗಿ ಕರ್ತವ್ಯ ನಿರ್ವಹಣೆ ಮಾಡಿದಂತೆ ಕ್ರೀಡೆಯಲ್ಲಿ ಆಸಕ್ತಿಯಿಂದ ಭಾಗವಹಿಸಿ ಕ್ರೀಡಾಕೂಟ ಯಶ್ವಸಿಗೊಳಿಸಿ ಎಂದು ಹೇಳಿದ್ರು. ಅಷ್ಟೇ ಅಲ್ಲದೆ ಜಿಲ್ಲಾಧಿಕಾರಿಗಳು ಬ್ಯಾಟ್ ಬಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ವರದಿ: ಗಾರಲ ದಿನ್ನಿ ವೀರನ ಗೌಡ